ಮೇರ್ಲಪದವು: ಯುವಕ ಆತ್ಮಹತ್ಯೆ
ಮಂಗಳೂರು, ಜ.18: ನಗರದ ಹೊರವಲಯದ ಮೇರ್ಲಪದವು ನಿವಾಸಿ ಅನಿಲ್ ಪ್ರಕಾಶ್ ರೆಬೆಲ್ಲೋ (31) ಎಂಬವರು ತನ್ನ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಕೃಷಿಕರಾಗಿರುವ ಅನಿಲ್ ಮಾನಸಿಕವಾಗಿ ಅಸ್ವಸ್ಥರಾಗಿದ್ದು, ನಗರದ ವೈದ್ಯರೊಬ್ಬರಿಂದ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಈ ಮಧ್ಯೆ ವಿಪರೀತ ಮದ್ಯಸೇವನೆ ಮಾಡುತ್ತಿದ್ದ ಇವರು ಶುಕ್ರವಾರ ರಾತ್ರಿ ಊಟ ಮಾಡಿ ರೂಮಿನ ಚಿಲಕ ಹಾಕಿ ಮಲಗಿದ್ದರು. ಶನಿವಾರ ಮಧ್ಯಾಹ್ನವರೆಗೂ ರೂಮಿನಿಂದ ಹೊರಬಾರದ ಕಾರಣ ಅನಿಲ್ರ ಪತ್ನಿ ಸಂಬಂಧಿಕರಿಗೆ ಮಾಹಿತಿ ನೀಡಿ ಬಾಗಿಲು ತೆಗೆದು ನೋಡಿದಾಗ ರೂಮಿನಲ್ಲಿ ನೇಣು ಬಿಗಿದಿರುವುದು ಕಂಡು ಬಂತೆನ್ನಲಾಗಿದೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story