ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ವಿಕಾಸ್ ಅಂಚನ್ಗೆ 6ನೇ ರ್ಯಾಂಕ್
ಮಂಗಳೂರು, ಜ. 23: ಕಾರ್ಕಳ ತಾಲೂಕಿನ ಇರ್ವತ್ತೂರು ಗ್ರಾಮದ ವಿಕಾಸ್ ಐ. ಅಂಚನ್ 2019ರ ನವೆಂಬರ್ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಅಂತಿಮ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ಆರನೇ (ಎಐಆರ್-6) ರ್ಯಾಂಕನ್ನು ಪಡೆದಿದ್ದಾರೆ. ಇವರು 2014ರಲ್ಲಿ ನಡೆದ ಸಿಎ-ಸಿಪಿಟಿ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದರು.
ಇರ್ವತ್ತೂರು ಶೇಖರ್ ಅಂಚನ್ ಮತ್ತು ಸರ್ವಾಣಿ ದಂಪತಿಯ ಸುಪುತ್ರ ವಿಕಾಸ್ ಐ. ಅಂಚನ್ ತನ್ನ ಪ್ರಾಥಮಿಕ ಶಿಕ್ಷಣವನ್ನು ಇರ್ವತ್ತೂರಿನ ಸರಕಾರಿ ಹಿ.ಪ್ರಾ. ಶಾಲೆ, ಪ್ರೌಢ ಶಿಕ್ಷಣವನ್ನು ಕಾರ್ಕಳದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪದವಿ ಶಿಕ್ಷಣವನ್ನು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದ್ದಾರೆ.
Next Story