ದ.ಕ. ಜಿಲ್ಲೆಯ 10 ಮಂದಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ
ಮಂಗಳೂರು, ಜ.24: ದ.ಕ.ಜಿಲ್ಲಾ ಮಟ್ಟದ ‘ಸರ್ವೋತ್ತಮ ಸೇವಾ ಪ್ರಶಸ್ತಿ-2020’ಗೆ ಸರಕಾರಿ ನೌಕರರನ್ನು ಆಯ್ಕೆ ಮಾಡಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಕೃಷ್ಣ ರಾವ್, ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್ ತೌವ್ರೋ, ಮಂಗಳೂರು ತಾಲೂಕು ಕಚೇರಿಯ ಉಪತಹಶೀಲ್ದಾರ್ ವತ್ಸಲಾ, ಸುಳ್ಯ ತಾಲೂಕು ಕಚೇರಿಯ ಕಂದಾಯ ನಿರೀಕ್ಷಕ ಕೊರಗಪ್ಪ, ಕಲ್ಲಮುಂಡ್ಕೂರು ಪಿಡಿಒ ಬಿ.ಉಗ್ಗಪ್ಪಮೂಲ್ಯ, ಮಂಗಳೂರು ಸಹಾಯಕ ಇಂಜಿನಿಯರ್ ಆನಂದ ಎಸ್. ಬಂಜನ್, ವೆನ್ಲಾಕ್ ಆಸ್ಪತ್ರೆಯ ಶುಶ್ರೂಷಕಿ ಸುಮಂಗಲಾ, ವಾಣಿಜ್ಯ ತೆರಿಗೆಯ ಇಲಾಖೆಯ ರತ್ನಾಕರ ಕೊಠಾರಿ, ಸಿಜೆಎಂ ನ್ಯಾಯಾಲಯದ ಶಿರೆಸ್ತೇದಾರ್ ಪ್ರಕಾಶ್ ನಾಯಕ್, ಕೃಷಿ ಇಲಾಖೆಯ ವಾಹನ ಚಾಲಕ ಎಂ. ದೇವದಾಸ ಆಯ್ಕೆಯಾಗಿರುತ್ತಾರೆ.
ಜ.26ರಂದು ನೆಹರೂ ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತರಿಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಗಳ ಪ್ರಕಟನೆ ತಿಳಿಸಿದೆ.
Next Story