ಉಡುಪಿ, ಜ.25: ಗುಂಡಿಬೈಲು ಓಳಿಗಾರುಬೆಟ್ಟು ನಿವಾಸಿ ಶಿವಾನಂದ ಹಾಗೂ ಶಾರದಾ ದಂಪತಿ ಮಗ ಪ್ರಜ್ವಲ್(13) ಎಂಬಾತ ಜ.23ರಂದು ಬೆಳಗ್ಗೆ 8ಗಂಟೆಗೆ ತನ್ನ ಸಂಬಂಧಿಕರ ಇಂದಿರಾನಗರ ಡಯಾನ ಟಾಕೀಸಿನ ಬಳಿಯ ಮನೆಯಿಂದ ಆಟ ಆಡಲು ಹೋದವನು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿ ರುವುದಾಗಿ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.