ಎಟಿಎಂ ಕಾರ್ಡ್ ನಂಬರ್ ಪಡೆದು ವಂಚನೆ: ದೂರು
ಉಡುಪಿ, ಜ.25: ಎಟಿಎಂ ಕಾರ್ಡ್ ನಂಬರ್ ಪಡೆದು ಮಹಿಳೆಯ ಖಾತೆ ಯಿಂದ ಲಕ್ಷಾಂತರ ರೂ. ಡ್ರಾ ಮಾಡಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರದ ಎಡಬೆಟ್ಟು ನಿವಾಸಿ ಪ್ರಭಾಕರ ನಾಯಕ್ ಎಂಬವರ ಪತ್ನಿ ಜಯಶ್ರೀ ನಾಯಕ್ (61) ಎಂಬವರ ಮೊಬೈಲ್ಗೆ ಜ.19ರಂದು ಎಟಿಎಂ ಸರ್ವಿಸ್ ಸೆಂಟರ್ನವರು ಎಂದು ಹೇಳಿ ಕರೆ ಮಾಡಿದ ಅಪರಿಚಿತರು, ಕಾರ್ಡ್ ಬ್ಲಾಕ್ ಆಗಿದೆ ಎಂದು ತಿಳಿಸಿ, ಎಟಿಎಂ ಕಾರ್ಡಿನ ವಿವರಗಳನ್ನು ಹಾಗೂ ಒಟಿಪಿ ನಂಬ್ರ ಪಡೆದರೆನ್ನಲಾಗಿದೆ.
ಆ ಮೂಲಕ ಇವರ ಬೀಜಾಡಿ ಕೆನರಾ ಬ್ಯಾಂಕಿನಲ್ಲಿರುವ ಎಸ್ಬಿ ಖಾತೆಯಿಂದ ಜ.19ರ ಮಧ್ಯಾಹ್ನದಿಂದ ಜ.20ರ ಬೆಳಗಿನ ಮಧ್ಯಾವಧಿಯಲ್ಲಿ 14 ಬಾರಿ ಒಟ್ಟು 1,59,976 ರೂ. ಹಣವನ್ನು ಡ್ರಾ ಮಾಡಿ, ವಂಚಿಸಿರುವುದಾಗಿ ದೂರಲಾಗಿದೆ.
Next Story