ಜ.28: ಕಲ್ಲಾಪು ಪೌರತ್ವ ಹೋರಾಟ ಸಮಿತಿಯಿಂದ ಪ್ರತಿಭಟನೆ
ಉಳ್ಳಾಲ: ಎನ್ಆರ್ಸಿ, ಸಿಎಎ ಮತ್ತು ಎನ್ಪಿಆರ್ ವಿರೋಧಿಸಿ ಪೌರತ್ವ ಹೋರಾಟ ಸಮಿತಿ ಕಲ್ಲಾಪು ವತಿಯಿಂದ ಜ.28ರಂದು ಕಲಾಪು ಬಳಿ ಇರುವ ಯುನಿಟಿ ಹಾಲ್ ಮೈದಾನದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜ.28ರ ಮಧ್ಯಾಹ್ನ 2.30ಕ್ಕೆ ಸಮಾವೇಶ ಆರಂಭಗೊಳ್ಳಲಿದೆ. ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಸಭೆಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ , ಸಾಮಾಜಿಕ ಹೋರಾಟಗಾರ ಅಮೃತಶೆಣೈ, ಬಾಲಕೃಷ್ಣ ಪೆರಿಯಾರ್, ವಕೀಲ ದಿನೇಶ್ ಹೆಗ್ಡೆ, ಅಬ್ದುಲ್ ಅಝೀಝ್ ದಾರಿಮಿ, ಮುನೀರ್ ಸಖಾಫಿ ಸೇರಿದಂತೆ ಹಲವು ಧಾರ್ಮಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮೇಲಂಗಡಿ ಜುಮಾ ಮಸೀದಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲ, ಯು.ಬಿ. ಸಲೀಂ, ಫೈರೋಝ್ ಅಹ್ಮದ್ ಉಳ್ಳಾಲ್, ಅಹ್ಮದ್ ಬಾವಾ, ಫಯಾಝ್ ಪಟ್ಲ, ನವಾಝ್ ಕಲ್ಲಾಪು, ಮೊಹಮ್ಮದ್ ಸಮೀರ್ ತಾರಿಪಡ್ಪು, ರವೂಫ್ ಬೆಳ್ಮ, ಸಾದಿಕ್ ಕಲ್ಲಾಪು, ಆಸೀಫ್ ಅಂಬಟಡಿ, ಸಮೀರ್ ಕಲ್ಲಾಪು, ಮಾಲಿಕ್ ಉಳ್ಳಾಲ್ ಉಪಸ್ಥಿತರಿದ್ದರು.