ಕಂದಾವರ ಪದವು: 71ನೇ ಗಣರಾಜ್ಯೋತ್ಸವ ಆಚರಣೆ
ಗುರುಪುರ/ಕೈಕಂಬ: ಅಲ್ ಮಸ್ಜಿದುಲ್ ಬದ್ರಿಯಾ ಕಂದಾವರ ಪದವು ಮಸೀದಿ ವಠಾರದಲ್ಲಿ 71ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
ಗೌರವಾಧ್ಯಕ್ಷರಾದ ಕೆ. ಎಂ ಬಾವ ಧ್ವಜಾರೋಹಣಗೈದರು. ಸ್ಥಳೀಯ ಮದ್ರಸ ಅಧ್ಯಾಪಕರಾದ ಅಬ್ದುಲ್ ರಝಾಕ್ ಮದನಿ ಸಂದೇಶ ಭಾಷಣ ಮಾಡಿದರು.
ನಂತರ ಮಾತನಾಡಿದ ಅಲ್ ಮಸ್ಜಿದುಲ್ ಬದ್ರಿಯಾ ಕಂದಾವರ ಅಧ್ಯಕ್ಷ ಅಬ್ದುರ್ರಹ್ಮಾನ್ ಮೂನ್ಲೈಟ್, ಎನ್ ಆರ್ ಸಿ, ಸಿಎಎ, ಎನ್ ಪಿ ಆರ್ ಮುಂತಾದ ಸಂವಿಧಾನ ವಿರೋಧಿ ಕಾಯ್ದೆಗಳನ್ನು ವಿರೋಧಿಸುವ ಮೂಲಕ ನೈಜ ಭಾರತೀಯರಾಗಿ, ಡಾ. ಬಿ ಆರ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನವನ್ನು ಉಳಿಸಬೇಕು ಎಂದರು.
ದಾವೂದ್ ಸನ, ರಫೀಕ್ ಪಿ.ಕೆ., ಅಹ್ಮದ್ ಬಾವ ಅಡ್ಡೂರು ಇನ್ನಿತರರು ಉಪಸ್ಥಿತರಿದ್ದರು.
Next Story