ಮಂಗಳೂರು : ಅಗ್ನಿ ಶಾಮಕ ಸಿಬ್ಬಂದಿ ಮೊಯ್ದಿನ್ ಕುಂಞಿಗೆ ರಾಷ್ಟ್ರಪತಿ ಪದಕ
ಮಂಗಳೂರು : ಪಾಂಡೇಶ್ವರದ ಅಗ್ನಿ ಶಾಮಕ ಮತ್ತು ತುರ್ತು ಸೇವಾ ಠಾಣೆಯ ಸಿಬ್ಬಂದಿ ಮೊಯ್ದಿನ್ ಕುಂಞಿ ಅವರು ಸಲ್ಲಿಸಿರುವ ವಿಶಿಷ್ಠ ಸೇವೆಗಾಗಿ ರಾಷ್ಟ್ರಪತಿಗಳ ವಿಶಿಷ್ಠ ಸೇವಾ ಪುರಸ್ಕಾರ ಲಭಿಸಿದೆ.
ಅಗ್ನಿ ಶಾಮಕ ಇಲಾಖೆಯಲ್ಲಿ ಸುಮಾರು 23 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಮಂಗಳೂರು ತಾಲೂಕಿನ ಕೈರಂಗಳದ ಮೊಯ್ದಿನ್ ಕುಂಞಿ ಅವರು ಪಾಂಡೇಶ್ವರ, ಕದ್ರಿ, ಎನ್ ಆರ್ ಪುರ ಆಗ್ನಿ ಶಾಮಕ ಠಾಣೆಗಳಲ್ಲಿ ಫಯರ್ ಮನ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಅಗ್ನಿ, ಅನಿಲ ದುರಂತ ಸೇರಿದಂತೆ ಅನೇಕ ತುರ್ತು ಸಂದರ್ಭಗಳ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ರಾಷ್ಟ್ರಮಟ್ಟದ ಪ್ರಶಸ್ತಿ ಬಂದಿರುವುದು ತುಂಬಾ ಸಂತೋಷ ತಂದಿದೆ ಎಂದು ಅವರು ತಿಳಿಸಿದ್ದಾರೆ.
Next Story