ಫರಂಗಿಪೇಟೆ: ಎಸ್ಡಿಪಿಐ ವತಿಯಿಂದ ಗಣರಾಜ್ಯೋತ್ಸವ
ಫರಂಗಿಪೇಟೆ : ಎಸ್ಡಿಪಿಐ ಪುದು ಗ್ರಾಮ ಸಮಿತಿ ವತಿಯಿಂದ ಫರಂಗಿಪೇಟೆಯಲ್ಲಿ ರವಿವಾರ ಗಣರಾಜ್ಯೋತ್ಸವ ಆಚರಿಸಲಾಯಿತು.
ಎಸ್ಡಿಪಿಐ ಪುದು ಗ್ರಾಮ ಸಮಿತಿ ಅಧ್ಯಕ್ಷ ಇಕ್ಬಾಲ್ ಅಮೆಮ್ಮಾರ್ ದ್ವಜಾರೋಹಣಗೈದರು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಫರಂಗಿಪೇಟೆ ವಲಯಾಧ್ಯಕ್ಷ ನಿಸಾರ್ ವಳವೂರು, ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಈ ಸಂದರ್ಭ ಮಾತನಾಡಿದರು.
ಎಸ್ಡಿಪಿಐ ಮಂಗಳೂರು ಕ್ಷೇತ್ರ ಸಮಿತಿ ಉಪಾಧ್ಯಕ್ಷ ಸುಲೈಮಾನ್ ಉಸ್ತಾದ್, ಪುದು ಗ್ರಾಮ ಪಂ ಸದಸ್ಯ ನಝೀರ್ ಹತ್ತನೇ ಮೈಲ್ ಕಲ್ಲು, ತುಂಬೆ ಗ್ರಾಮ ಪಂ ಸದಸ್ಯ ಝಹೂರ್, ಅಡ್ಯಾರ್ ಗ್ರಾಮ ಪಂ. ಸದಸ್ಯ ಯಾಸೀನ್ ಅರ್ಕುಳ, ಎಸ್ಡಿಪಿಐ ತುಂಬೆ ಗ್ರಾಮ ಸಮಿತಿ ಅಧ್ಯಕ್ಷ ಅಝೀಝ್, ಪಿಎಫ್ಐ ಫರಂಗಿಪೇಟೆ ಅಧ್ಯಕ್ಷ ಬಶೀರ್, ಅರ್ಕುಳ ವಲಯ ಅಧ್ಯಕ್ಷ ರಶೀದ್ ಅರ್ಕುಳ ಈ ಸಂದರ್ಭ ಉಪಸ್ಥಿತರಿದ್ದರು. ಸಂವಿಧಾನದ ಪ್ರಸ್ತಾವನೆಯನ್ನು ಪ್ರತಿಜ್ಞೆ ಮಾಡಲಾಯಿತು. ಖಾದರ್ ಅಮೆಮ್ಮಾರ್ ಸ್ವಾಗತಿಸಿ, ನಿರೂಪಿಸಿದರು.
Next Story