ಉದ್ಯಮಿ ಜಯರಾಂ ಕೆ.ಬಂಗೇರ ನಿಧನ
ಬೆಳ್ತಂಗಡಿ, ಫೆ. 2: ಕೇದೆ ಮನೆತನದ ಕುವೆಟ್ಟು ಗ್ರಾಮದ ಹೊಸಮನೆ ಕೇದೆ ನಿವಾಸಿ ಉದ್ಯಮಿ ಜಯರಾಂ ಬಂಗೇರ (61) ಅವರು ಹೃದಯಾಘಾತದಿಂದ ರವಿವಾರ ನಿಧನರಾದರು.
ಉದ್ಯಮಿಯಾಗಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸೇವಾ ಸಂಘದ ಕೋಶಾಧಿಕಾರಿಯಾಗಿ, ಇತರ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಸಹೋದರರಾದ ಮಾಜಿ ಶಾಸಕರಾದ ಕೆ. ವಸಂತ ಬಂಗೇರ, ಪ್ರಭಾಕರ ಬಂಗೇರ ಸಹಿತ ಇಬ್ಬರು ಪುತ್ರನ್ನು ಅಗಲಿದ್ದಾರೆ.
Next Story