ಮಂಗಳೂರು: ಕಾರ್ಪೊರೇಟರ್ಗೆ ಅಶ್ಲೀಲ ವಾಟ್ಸ್ಆ್ಯಪ್ ಸಂದೇಶ ರವಾನೆ ; ಆರೋಪಿ ಸೆರೆ
ಸುರತ್ಕಲ್, ಫೆ.12: ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ವೊಬ್ಬರಿಗೆ ಕೆಲವು ಸಮಯದಿಂದ ವಾಟ್ಸ್ ಆ್ಯಪ್ ಮೂಲಕ ಅಶ್ಲೀಲ ಸಂದೇಶ ಹಾಗೂ ಚಿತ್ರಗಳನ್ನು ರವಾನಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಯುವಕನನ್ನು ಸುರತ್ಕಲ್ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಮುಡಿಪು ನಿವಾಸಿ ಭರತ್ ಶೆಟ್ಟಿ (32) ಬಂಧಿತ ಆರೋಪಿ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮಾಧ್ಯಮವೊಂದರಲ್ಲಿ ಪ್ರಕಟಗೊಂಡ ಈ ಕಾರ್ಪೊರೇಟರ್ರ ಮೊಬೈಲ್ ನಂಬ್ರವನ್ನು ಅಧರಿಸಿ ಆರೋಪಿ ಅಶ್ಲೀಲ ಸಂದೇಶ ಕಳಿಹಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಕಾರ್ಪೊರೇಟರ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
Next Story