ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟ ಬಿರುವೆರ್ ಕುಡ್ಲ ಬಜಪೆ ಘಟಕ
ಮಂಗಳೂರು, ಫೆ.16: ಆರ್ಥಿಕವಾಗಿ ಹಿಂದುಳಿದ ಕುಟುಂಬವಿಂದಕ್ಕೆ ಬಿರುವೆರ್ ಕುಡ್ಲ ಬಜಪೆ ಘಟಕವು ಮನೆ ನಿರ್ಮಿಸಿಕೊಟ್ಟು ಆದರ್ಶ ಮೆರೆದಿದೆ. ಬಜ್ಪೆಯ ಸುಕುಮಾರ್ ದಂಪತಿಯು ಹಲವು ವರ್ಷಗಳಿಂದ ಪ್ಲಾಸ್ಟ್ಟಿಕ್ ಛಾವಣಿಯ ಮನೆಯಲ್ಲಿ ವಾಸವಿದ್ದರು. ಮಳೆ ಬಂದರೆ ಮನೆಯೊಳಗೆಲ್ಲಾ ನೀರು ಸೋರುತ್ತಿತ್ತು. ಇದನ್ನು ಕಂಡ ಬಿರುವೆರ್ ಕುಡ್ಲ ಬಜಪೆ ಘಟಕವು ವಾನವೀಯ ನೆಲೆಯಲ್ಲಿ ನೆರವು ನೀಡಿದೆ.
ಅಂದರೆ ಹಲವಾರು ದಾನಿಗಳ ನೆರವಿನಿಂದ ‘ಸ್ಪಂದನ’ ಎಂಬ ಹೆಸರಿನ ಸುಸಜ್ಜಿತ ಮನೆಯೊಂದನ್ನು ನಿರ್ಮಿಸಿ ರವಿವಾರ ಹಸ್ತಾಂತರಿಸಿತು. ಈ ಸಂದರ್ಭ ಶಾಸಕ ಡಾ.ಭರತ್ ಶೆಟ್ಟಿ, ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ಬಾಗ್, ಬಜಪೆ ಘಟಕದ ಸಂಘಟಕ ಚಂದ್ರಶೇಖರ ಅಮೀನ್, ಕಾರ್ಪೊರೇಟರ್ ಅನಿಲ್ ಕುಮಾರ್, ಪ್ರಮುಖರಾದ ಶಿವರಾಂ ಪೂಜಾರಿ, ಕಿಶೋರ್ ಉಡುಪಿ, ಭರತ್ರಾಜ್ ಕೃಷ್ಣಾಪುರ, ಶರತ್, ಲಕ್ಷ್ಮೀಶ ಮತ್ತಿತರರು ಉಪಸ್ಥಿತರಿದ್ದರು.
Next Story