ನಾಪತ್ತೆಯಾಗಿದ್ದ ಮಂಗಳೂರಿನ ಮೂವರು ದಾವಣಗೆರೆಯಲ್ಲಿ ಸೆರೆ
ಶ್ರೀಗಂಧ ಕಳ್ಳಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಬಂಧನ
ಮಂಗಳೂರು, ಫೆ.16: ಮಂಗಳೂರಿನಿಂದ ಮೈಸೂರಿಗೆ ವ್ಯವಹಾರ ನಿಮಿತ್ತ ಹೊರಟ ಶುಂಠಿ ವ್ಯಾಪಾರಿಗಳಾದ ವೆಲೆನ್ಸಿಯಾ ನಿವಾಸಿ ಸಿರಾಜುದ್ದೀನ್, ಅವರ ಅಣ್ಣ ಸಂಶುದ್ದೀನ್ ಮತ್ತವರ ಸ್ನೇಹಿತ ಶಾ ನವಾಝ್ ಅವರನ್ನು ಶ್ರೀಗಂಧ ಕಳ್ಳಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಫೆ. 11ರಂದು ಮೈಸೂರಿಗೆ ಹೊರಟಿದ್ದ ಇವರು ಬಳಿಕ ನಾಪತ್ತೆಯಾಗಿದ್ದರು. ಈ ಬಗ್ಗೆ ಸಿರಾಜುದ್ದೀನ್ ಅವರ ಪತ್ನಿ ಫರಾ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದರು. ಅದರಂತೆ ತನಿಖೆ ನಡೆಸಿದಾಗ ಇವರು ದಾವಣಗೆರೆಯಲ್ಲಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಇದೀಗ ಶ್ರೀಗಂಧ ಕಳ್ಳ ಸಾಗಣೆ ಪ್ರಕರಣದಲ್ಲಿ ಇವರನ್ನು ಬಂಧಿಸಿರುವ ಬಗ್ಗೆ ದಾವಣಗೆರೆ ಎಸ್ಪಿ ಕೂಡ ಖಚಿತಪಡಿಸಿದ್ದಾರೆ. ಇವರೊಂದಿಗೆ ಕೇರಳದ ಒಬ್ಬ ಮತ್ತು ಮೈಸೂರಿನ ಇಬ್ಬರನ್ನು ಕೂಡಾ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
Next Story