ಮಾಳ ಅಪಘಾತ: ಇಬ್ಬರ ಮೃತದೇಹ ಹಸ್ತಾಂತರ
ಕಾರ್ಕಳ, ಫೆ.16: ಮಾಳ ಮುಳ್ಳೂರು ಘಾಟಿಯಲ್ಲಿ ಫೆ.15ರಂದು ಸಂಭವಿ ಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಒಂಭತ್ತು ಮಂದಿಯ ಪೈಕಿ ಉಳಿದ ಇಬ್ಬರ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಕೂಡ ಇಂದು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ನಡೆಸಿ, ಅವರ ಕುಟುಂಬ ಗಳಿಗೆ ಹಸ್ತಾಂತರಿಸಲಾಗಿದೆ.
ಮೃತರಲ್ಲಿ ಏಳು ಮಂದಿಯ ಮೃತದೇಹವನ್ನು ರವಿವಾರವೇ ಕುಟುಂಬದ ವರು ತೆಗೆದುಕೊಂಡು ಹೋಗಿದ್ದರೆ, ಚಾಲಕ ತುಮಕೂರಿನ ರಾಧಾರವಿ ಹಾಗೂ ಕ್ಲೀನರ್ ತುಮಕೂರಿನ ಮಾರುತಿಯ ಮೃತದೇಹಗಳನ್ನು ಇಂದು ಊರಿಗೆ ರವಾನಿಸಲಾಯಿತು.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಒಂಭತ್ತು ಮಂದಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಎಲ್ಲರು ಚೇತರಿಸಿ ಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಕಳ ಸಿಟಿ ನರ್ಸಿಂಗ್ ಹೋಮ್ನಲ್ಲಿ ದಾಖಲಾಗಿದ್ದ 11 ಮಂದಿ, ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಏಳು ಮಂದಿ ಗುಣಮುಖರಾಗಿ ಬಿಡುಗೆ ಹೊಂದಿದ್ದಾರೆ ಎಂದು ತಿಳಿದುಬಂದಿದೆ.
Next Story