ರಾಷ್ಟ್ರೀಯ ಕೆಥೋಲಿಕ್ ಕ್ರೈಸ್ತ ಆರಾಧನ ಆಯೋಗದ ಅಧ್ಯಕ್ಷರಾಗಿ ಮಂಗಳೂರು ಬಿಷಪ್ ಆಯ್ಕೆ
ಮಂಗಳೂರು, ಫೆ.19: ಮಂಗಳೂರು ಧರ್ಮಪ್ರಾಂತದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ರಾಷ್ಟ್ರೀಯ ಕೆಥೋಲಿಕ್ ಕ್ರೈಸ್ತ ಆರಾಧನ ಆಯೋಗದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಫೆ.13ರಿಂದ 19ರ ತನಕ ಬೆಂಗಳೂರಿನ ಸಂತ ಜಾನ್ಸ್ ಮೆಡಿಕಲ್ ಅಕಾಡಮಿಯಲ್ಲಿ ಭಾರತೀಯ ಕೆಥೋಲಿಕ್ ಬಿಷಪರ ಮಂಡಳಿಯ 34ನೇ ಸಮಗ್ರ ಸಭೆಯು ನಡೆಯಿತು. ಈ ಸಭೆಯಲ್ಲಿ ‘ಸಂವಾದ - ಪ್ರೀತಿ ಮತ್ತು ಸೌರ್ಹಾದೆತೆಗೆ ದಾರಿ’ ಎಂಬ ವಿಷಯದ ಮೇಲೆ ಚರ್ಚಿಸಲಾಯಿತು.
ಭಾರತದ 174 ಧರ್ಮಪ್ರಾಂತಗಳಿಂದ 193 ಬಿಷಪರು ಹಾಗೂ 5 ಕಾರ್ಡಿನಲ್ಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Next Story