ಯಡ್ತಾಡಿ: ಆಧಾರ್ ನೋಂದಣಿ, ತಿದ್ದುಪಡಿ ಶಿಬಿರ
ಉಡುಪಿ, ಫೆ.19: ವಿನಾಯಕ ಯುವಕ ಮಂಡಲ, ಯಡ್ತಾಡಿ ಇವರ ಸಹಯೋಗದೊಂದಿಗೆ ಯಡ್ತಾಡಿ ಶಾಖೆಯ ಅಂಚೆಪಾಲಕಿ ಚೈತ್ರರ ನೇತೃತ್ವ ದಲ್ಲಿ ಯಡ್ತಾಡಿಯಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರವನ್ನು ಆಯೋಜಿಸಲಾಗಿತ್ತು. 710ಮಂದಿ ವಿವಿಧ ಆಧಾರ್ ಸೇವೆಗಳ ಪ್ರಯೋಜನ ಪಡೆದುಕೊಂಡರು.
ಉಡುಪಿ ಅಂಚೆ ವಿಭಾಗದಿಂದ ಆಯೋಜಿಸಿದ್ದ 45ನೇ ಆಧಾರ್ ಶಿಬಿರ ಇದಾಗಿದ್ದು, ಇದೇ ಸಂದರ್ದಲ್ಲಿ 94 ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆ ತೆರೆಯುವ ಮೂಲಕ ಗ್ರಾಹಕರಿಗೆ ಮೊಬೈಲ್ ಬ್ಯಾಂಕಿಂಗ್ ಸೌಲ್ಯ ಒದಗಿಸಲಾಯಿತು.
Next Story