ಪ್ರವಾದಿ ನಿಂದನೆ-ಕೋಮು ಪ್ರಚೋದನೆ: ಮಧುಗಿರಿ ಮೋದಿ ವಿರುದ್ಧ ಬೆಳ್ತಂಗಡಿ ಠಾಣೆಗೆ ದೂರು
ಬೆಳ್ತಂಗಡಿ: ಪ್ರವಾದಿ ನಿಂದನೆ ಮತ್ತು ಕೋಮು ಪ್ರಚೋದಕ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಡಿರುವುದಕ್ಕೆ ಮಧುಗಿರಿ ಮೋದಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಬೆಳ್ತಂಗಡಿ ಎಸ್ಕೆಎಸ್ಸೆಸ್ಸೆಫ್ ವಲಯದ ವತಿಯಿಂದ ದೂರು ಸಲ್ಲಿಸಲಾಯಿತು.
ಸಬ್ಇನ್ಸ್ಪೆಕ್ಟರ್ ನಂದ ಕುಮಾರ್ ಬೆಳ್ತಂಗಡಿ ಠಾಣೆಯಲ್ಲಿ ದೂರು ಅರ್ಜಿ ಸ್ವೀಕರಿಸಿದರು.
ಎಸ್ಕೆಎಸ್ಸೆಸ್ಸೆಫ್ ವಲಯ ಉಪಾಧ್ಯಕ್ಷ ರಝಾಕ್ ಕನ್ನಡಿಕಟ್ಟೆ, ಕಾರ್ಯದರ್ಶಿ ರಿಯಾಝ್ ಫೈಝಿ ಕಕ್ಕಿಂಜೆ, ಕೋಶಾಧಿಕಾರಿ ಹಕೀಂ ಬಂಗೇರಕಟ್ಟೆ, ಸದಸ್ಯರಾದ ಸಿರಾಜ್ ಚಿಲಿಂಬಿ, ಬೆಳ್ತಂಗಡಿ ಜುಮಾ ಮಸ್ಜಿದ್ ಖತೀಬ್ ಅಬ್ಬಾಸ್ ಫೈಝಿ ದಿಡುಪೆ, ದಾರುಸ್ಸಲಾಂನ ಫೈಝಲ್ ಉಪಸ್ಥಿತರಿದ್ದರು.
Next Story