ಬೆಂಕಿ ಅಕಸ್ಮಿಕ: ವೃದ್ಧೆ ಮೃತ್ಯು
ಬೈಂದೂರು, ಫೆ.20: ಬಿಜೂರು ಗ್ರಾಮದ ಮೈಯ್ಯರ ಹಿತ್ಲು ಎಂಬಲ್ಲಿ ಸಂಭವಿಸಿದ ಬೆಂಕಿ ಅಕಸ್ಮಿಕದಿಂದ ವೃದ್ಧೆಯೊಬ್ಬರು ಗಂಭೀರವಾಗಿ ಗಾಯ ಗೊಂಡು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಮೈಯ್ಯರ ಹಿತ್ಲು ನಿವಾಸಿ ಚಂದು(80) ಎಂದು ಗುರುತಿಸಲಾಗಿದೆ.
ಫೆ.14ರಂದು ಸಂಜೆ ಬಚ್ಚಲ ಮನೆಯ ಓಲೆಗೆ ಬೆಂಕಿ ಹಚ್ಚುತ್ತಿದ್ದ ಇವರು ಆಕಸ್ಮಿಕವಾಗಿ ಬೆಂಕಿ ತಗುಲಿ ಗಾಯಗೊಂಡಿದ್ದರು. ಗಂಭೀರ ಸ್ಥಿತಿಯಲ್ಲಿ ಇದ್ದ ಇವರು ಫೆ.19ರಂದು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟರು.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story