ಮಂಗಳೂರು: ಕಾರು ಢಿಕ್ಕಿ ; ಮೂವರು ರಿಕ್ಷಾ ಪ್ರಯಾಣಿಕರಿಗೆ ಗಾಯ
ಕಾರು ಚಾಲಕ ಪಾನಮತ್ತ ಪೊಲೀಸ್ ಎಂದು ಸ್ಥಳೀಯರ ಆರೋಪ
ಮಂಗಳೂರು : ಪಾನಮತ್ತನಾಗಿ ಕಾರು ಚಲಾಯಿಸಿದ ಪರಿಣಾಮ ಆಟೋ ರಿಕ್ಷಾವೊಂದಕ್ಕೆ ಢಿಕ್ಕಿ ಹೊಡೆದಿದ್ದು, ಅಪಘಾತದಿಂದ ರಿಕ್ಷಾದಲ್ಲಿದ್ದ ಮೂರು ಮಂದಿ ಗಾಯಗೊಂಡ ಘಟನೆ ಮಂಗಳೂರು ನಗರದ ಕುಲಶೇಖರ ಕೋಟಿಮುರದಲ್ಲಿ ರವಿವಾರ ಸಂಜೆ ವೇಳೆ ನಡೆದಿದೆ.
ಮಂಗಳೂರಿನ ಪೊಲೀಸರೋರ್ವರು ಪಾನಮತ್ತನಾಗಿ ಕಾರು ಚಾಲನೆ ಮಾಡುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದು, ಅಪಘಾತದ ನಂತರ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ. ಅಪಘಾತದಿಂದ ರಿಕ್ಷಾದಲ್ಲಿದ್ದ ಮಗು ಸಹಿತ ಮೂವರು ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.
Next Story