ಬಡ, ಅನಾಥರ ಸೇವೆಗೈಯುವವರ ಕೈ ಬಲಪಡಿಸಿ: ಎಪಿ ಉಸ್ತಾದ್
ವಿಟ್ಲ : ಬಡ ಮತ್ತು ಅನಾಥರಿಗೆ ಸಹಾಯ ಮಾಡುವುದನ್ನು ಅಲ್ಲಾಹನು ಹೆಚ್ಚು ಇಷ್ಟಪಡುತ್ತಾನೆ ಮತ್ತು ಪ್ರವಾದಿ ಸ.ಅ ರವರು ಬಹಳಷ್ಟು ಪ್ರೋತ್ಸಾಹಿಸಿರುವುದರಿಂದ ಬಡ ಮತ್ತು ಅನಾಥರ ಸೇವೆಗೈಯುವರ ಕೈಯನ್ನು ಬಲಪಡಿಸಬೇಕೆಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಹೇಳಿದ್ದಾರೆ.
ದುಲ್ ಪುಖಾರ್ ಸೇವಾ ಸಂಘ ಚೆಡವು ಕನ್ಯಾನ ಇದರ 20 ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಪ್ರಭಾಷಣ ಮಾಡಿದರು.
ಕನ್ಯಾನ ಖಾಝಿ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅವರು ದುವಾಃ ಆಶೀರ್ವಚನ ನೀಡಿದರು. ಶೈಖುನಾ ಕನ್ಯಾನ ಉಸ್ತಾದ್ ಅಧ್ಯಕ್ಷತೆ ವಹಿಸಿದ್ದರು. ಮಹಮ್ಮದ್ ನಿಯಾಝ್ ಕಾಮಿಲ್ ಸಖಾಫಿ ಉದ್ಘಾಟಿಸಿದರು.
ಜಬ್ಬಾರ್ ಸಖಾಫಿ ಪಾತೂರು, ಸಿರಾಜುದ್ದೀನ್ ಸಖಾಫಿ ಕನ್ಯಾನ ಭಾಷಣಗೈದರು.
ಅಸ್ಸಯ್ಯಿದ್ ಜಅಫರ್ ಸ್ವಾದಿಕ್ ತಂಙಳ್ ಕುಂಬೋಳ್, ಶೈಖುನಾ ತಾಜುಶ್ಯೇರಿಯ್ಯ ಆಲಿಕುಂಙಿ ಉಸ್ತಾದ್, ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಹಾಗೂ ಮಾಜಿ ಸಚಿವ ಯು ಟಿ. ಖಾದರ್, ರಮಾನಾಥ ರೈ, ಎಂಎಸ್ ಮುಹಮ್ಮದ್ ಭಾಗವಹಿಸಿದ್ದರು.
Next Story