ಹೊಳೆಗೆ ಹಾರಿ ಆತ್ಮಹತ್ಯೆ
ಕುಂದಾಪುರ, ಫೆ. 25: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ 76ನೇ ಹಾಲಾಡಿ ಗ್ರಾಮದ ಹಿಜಿರಿಬೈಲು ನಿವಾಸಿ ಲಕ್ಷ್ಮಣ ಶೆಟ್ಟಿ(62) ಎಂಬ ವರು ಜೀವನದಲ್ಲಿ ಜಿಗುಪ್ಸೆಗೊಂಡು ಫೆ.19ರಂದು ಮನೆಯಿಂದ ಹೋದವರು ಹೊಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರ ಮೃತದೇಹ ಫೆ.24 ರಂದು ಹಳ್ನಾಡು ವಾರಾಹಿ ನದಿಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story