ಮಾ.1: ಹೊಸಂಗಡಿಯಲ್ಲಿ ಧಾರ್ಮಿಕ ಕಾರ್ಯಕ್ರಮ
ಮಂಗಳೂರು, ಫೆ.26: ಮಜ್ಲಿಸುಸನಾಬಿಲಿಲ್ ಇರ್ಫಾನ್ ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಆಫ್ ಎಂಪಿ ಉಸ್ತಾದ್, ಇಮಾಂ ಶಾಫಿ ಅಕಾಡಮಿ ಜಲ್ಸಾ ಪ್ರಚಾರ ಹಾಗೂ ಶೈಖುನಾ ಖಾಸಿಂ ಉಸ್ತಾದ್ ಅನುಸ್ಮರಣೆಯು ಮಾ.1ರಂದು ಅಪರಾಹ್ನ 2:30ಕ್ಕೆ ಹೊಸಂಗಡಿ ಸಮಸ್ತ ಆಸ್ಥಾನದಲ್ಲಿ ನಡೆಯಲಿದೆ.
ಸೈಯದ್ ಬಾತಿಷ್ ತಂಙಳ್ ಆನೆಕಲ್ಲು ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್ಹಾಜ್ ಶೈಖುನಾ ಎಂಪಿ ಮುಹಮ್ಮದ್ ಸಅದಿ ಕಾರ್ಯಕ್ರಮ ಉದ್ಘಾಟಿಸುವರು. ಇಮಾಂ ಶಾಫಿ ಅಕಾಡಮಿಯ ಮ್ಯಾನೇಜರ್ ಝುಬೈರ್ ನಿಝಾಮಿ ಮುಖ್ಯ ಭಾಷಣ ಮಾಡಲಿದ್ದಾರೆ. ಇಮಾಂ ಶಾಫಿ ಅಕಾಡಮಿಯ ಪ್ರೊಫೆಸರ್ ಅಬ್ದುರ್ರಹ್ಮಾನ್ ಹೈತಮಿ, ಯು.ಕೆ. ಹನೀಫ್ ನಿಝಾಮಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story