ಬಡಾಕೆರೆ ದೇವಳದಲ್ಲಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು
ಬೈಂದೂರು, ಫೆ. 27: ಬಡಾಕೆರೆ ಗ್ರಾಮದ ಶ್ರೀಲಕ್ಷ್ಮೀ ಜನಾರ್ದನ ದೇವಸ್ಥಾನಕ್ಕೆ ಫೆ. 25ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ದೇವಸ್ಥಾನದ ಒಳಪ್ರವೇಶಿಸಿದ ಕಳ್ಳರು, ಗರ್ಭಗುಡಿಯ ಚೌಕಟ್ಟಿಗೆ ಅಳವಡಿಸಿದ 13 ಕೆಜಿ ತೂಕದ ಬೆಳ್ಳಿಯ ಹೊದಿಕೆ, ಗರ್ಭಗುಡಿಯ ಒಳಗಿದ್ದ ಪ್ರಭಾವಳಿಯ ಹಿತ್ತಾಳೆಯ ಕೊಡೆ, ಬೆಳ್ಳಿಯ ಕೌಳಿಗೆ ಮತ್ತು ಸೌಟು, 3 ಸಿಸಿ ಕೆಮರಾ, ಸಿಸಿ ಟಿವಿ ಹಾಗೂ ಹೊರ ಪೌಳಿಯಲ್ಲಿದ್ದ ಆಫೀಸಿನ ಬೀಗ ಹಾಕುವ ಕೊಂಡಿಯನ್ನು ಮುರಿದು ಒಳಗಡೆ ಕಪಾಟಿನಲ್ಲಿದ್ದ 20,000 ರೂ. ಹಾಗೂ ಕೋಣೆಯಲ್ಲಿದ್ದ ಡಿವಿಆರ್ಗಳನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 7,85,000 ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story