ಮೂಳೂರು-ಅಡ್ಡೂರು ಗ್ರಾಮಗಳಲ್ಲಿ ಕಾಮಗಾರಿಗೆ ಚಾಲನೆ
ಗುರುಪುರ, ಮಾ.15: ಗುರುಪುರ ಗ್ರಾಪಂ ವ್ಯಾಪ್ತಿಯ ಮೂಳೂರು ಹಾಗೂ ಅಡ್ಡೂರು ಗ್ರಾಮದಲ್ಲಿ ನಡೆಯಲಿರುವ 1.65 ಕೋ.ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ರವಿವಾರ ಶಾಸಕ ಡಾ. ಭರತ್ ಶೆಟ್ಟಿ ಚಾಲನೆ ನೀಡಿದರು.
ಅನುದಾನದಲ್ಲಿ ನಡೆಯಲಿರುವ ಗುರುಪುರ ಜಂಕ್ಷನ್ನಿಂದ ಶ್ರೀ ಕ್ಷೇತ್ರ ಜಂಗಮ ಮಠದವರೆಗಿನ ಚಾಮಾಣಿ ರಸ್ತೆ ಡಾಮರೀಕರಣ ಕಾಮಗಾರಿ (30 ಲಕ್ಷ ರೂ), ತೋಕಾಲ-ಮಲ್ಲಿಗೆ ರಸ್ತೆ (9ಲ.ರೂ), ವನಭೋಜನ ಒಳರಸ್ತೆ (15ಲ.ರೂ), ಗುರುಪುರ ಪ್ರಾಥಮಿಕ ಶಾಲೆಯ ಹಿಂಬದಿ ರಸ್ತೆ (14 ಲ.ರೂ), ಹೈಸ್ಕೂಲ್ ಬಳಿ ಒಳರಸ್ತೆ (4 ಲ.ರೂ), ಮಠದಬೈಲು ಸೈಟ್ (6 ಲ.ರೂ) ಹಾಗೂ ಅಡ್ಡೂರಿನಲ್ಲಿ ಎರಡು ಒಳ ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.
ಈ ಸಂದರ್ಭ ಗುರುಪುರ ಬಿಜೆಪಿ ವಲಯಾಧ್ಯಕ್ಷ ರಾಜೇಶ್ ಸುವರ್ಣ, ಗ್ರಾಪಂ ಸದಸ್ಯರಾದ ಸೇಸಮ್ಮ, ಶೋಭಾ, ಸಾದಿಕ್, ಬಿಜೆಪಿಯ ಶ್ರೀಕರ ವಿ. ಶೆಟ್ಟಿ, ಸೋಮಯ್ಯ, ಹರೀಶ್ ಬಳ್ಳಿ, ಶಾಂತಿ, ಸತೀಶ್ ಕಾವ, ರಾಜೇಶ್ ಶೆಟ್ಟಿ, ಕಾರ್ಪೊರೇಟರ್ ಲೋಹಿತ್ ಅಮೀನ್, ಜಿ. ಲಕ್ಷ್ಮಣ್ ಶೆಟ್ಟಿಗಾರ, ಶಿವಪ್ರಸಾದ್ ಭಟ್, ಕೆ. ನರಸಿಂಹ ಪೂಜಾರಿ, ವಿನಯ್ ಗುರುಪುರ, ಹೇಮಚಂದ್ರ ಪೂಜಾರಿ, ರಾಮಚಂದ್ರ, ಹರೀಂದ್ರ, ನಳಿನಾಕ್ಷಿ ಶೆಟ್ಟಿ, ವಸಂತ ಪೂಜಾರಿ, ತನಿಯಪ್ಪಪೂಜಾರಿ, ಜಿ. ಕೆ. ಸಂದೇಶ್ ಕೊಳದಬದಿ, ಮನೋಜ್, ಸುನಿಲ್ ಪೂಜಾರಿ ಜಲ್ಲಿಗುಡ್ಡೆ, ಕೂಸಪ್ಪಮಾಸ್ತರ್, ವಿಜಯ್ ಅಲೈಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
ವಕೀಲ ಜಯಪ್ರಕಾಶ್ ಭಂಡಾರಿ ಸ್ವಾಗತಿಸಿ, ವಂದಿಸಿದರು.
...