ತುರ್ತು ಸೇವೆ ನೀಡಲು ಎಸ್ವೈಎಸ್ ಕರೆ
ಮಂಗಳೂರು, ಮಾ.24: ಕೊರೋನ ಅತ್ಯಂತ ಭಯಾನಕತೆಯನ್ನು ಸೃಷ್ಟಿಸುತ್ತಿದ್ದು, ಜನತೆ ಅನಿವಾರ್ಯವಾಗಿ ಮನೆಯಲ್ಲೇ ಕಡ್ಡಾಯವಾಗಿ ಇರಬೇಕಾದ ಪರಿಸ್ಥಿತಿ ಇದೆ. ಇಂತಹ ವಿಷಮ ಸ್ಥಿತಿಯಲ್ಲಿ ಸರಕಾರ ಮತ್ತು ಆರೋಗ್ಯ ಇಲಾಖೆಯ ಆದೇಶವನ್ನು ಪಾಲಿಸಲು ಸಮಸ್ತ ಅಧ್ಯಕ್ಷ ಜಿಫ್ರಿ ಮುತ್ತುಕೋಯ ತಂಙಳ್ ಸಹಿತ ಎಲ್ಲಾ ಖಾಝಿಗಳು ನಿರ್ದೇಶನವನ್ನು ನೀಡಿದ್ದಾರೆ. ಹಾಗಾಗಿ ಈ ವೇಳೆ ಆಹಾರ ಸಾಮಗ್ರಿ ಸಿಗದೆ ಮತ್ತು ಆರ್ಥಿಕ ತೊಂದರೆ ಎದುರಿಸುವವರಿಗೆ ಹಾಗೂ ತುರ್ತು ವೈದ್ಯಕೀಯ ಸೇವೆ ನೀಡಲು ಎಲ್ಲಾ ಜಮಾಅತ್ ಸಮಿತಿ ಮತ್ತು ಸಮಸ್ತ ಸಂಘಸಂಸ್ಥೆಗಳು ಮುಂದೆ ಬರಬೇಕು ಎಂದು ಎಸ್ವೈಎಸ್ ದ.ಕ.ಜಿಲ್ಲಾ ಸಮಿತಿಯು ಅಧ್ಯಕ್ಷ ಅಬ್ದುಲ್ ಅಝೀಝ್ ದಾರಿಮಿ ಕರೆ ನೀಡಿದ್ದಾರೆ
Next Story