ಮಂಗಳೂರು : ಕೊರೋನ ವೈರಸ್ ಭೀತಿ ಹಿನ್ನೆಲೆಯಲ್ಲಿ 21 ದಿನಗಳ ಲಾಕ್ ಡೌನ್ ಘೋಷಿಸಿರುವಂತೆಯೇ ನಗರದಲ್ಲಿ ಸಂಚಾರಕ್ಕೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಸಾಕಷ್ಟು ಎಚ್ಚರಿಕೆ ಹೊರತಾಗಿಯೂ ಕೇಂದ್ರ ಮಾರುಕಟ್ಟೆಯಲ್ಲಿ ನೂರಾರು ಮಂದಿ ಖರೀದಿಗಾಗಿ ಸೇರಿದ್ದರಿಂದ ಮನಪಾ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಜನರನ್ನು ವಾಪಾಸು ಕಳುಹಿಸಿದರು.