ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಮುಳುಗಿ ಯುವಕ ಮೃತ್ಯು
ಬಂಟ್ವಾಳ, ಮಾ. 26: ಈಜಲು ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬಂಟ್ವಾಳ ತಾಲೂಕಿನ ಸೂರಿಕುಮೇರು ಸಮೀಪದ ಕಾಗೆಕಾನ ನೇತ್ರಾವತಿ ನದಿಯಲ್ಲಿ ಗುರುವಾರ ಸಂಜೆ ನಡೆದಿದೆ.
ಮಾಣಿ ನಿವಾಸಿ ರಹೀಂ (26) ಮೃತರು ಎಂದು ಗುರುತಿಸಲಾಗಿದೆ. ಗೆಳೆಯರೊಂದಿಗೆ ಈಜಲು ತೆರಳಿದ್ದ ರಹೀಂ ನೀರಿನ ಆಳ ಅರಿಯದೆ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವಿದೇಶದಲ್ಲಿ ಇದ್ದ ಮೃತ ರಹೀಂ ಕೆಲವು ಸಮಯದ ಹಿಂದೆ ಊರಿಗೆ ಬಂದಿದ್ದರು. ತುಂಬೆ ಡ್ಯಾಂ ಹಿನ್ನೆಲೆಯಲ್ಲಿ ನದಿಯಲ್ಲಿ ತುಂಬಾ ನೀರಿದ್ದು ಮೃತರು ಮುಳುಗಿರುವ ಸ್ಥಳದಲ್ಲಿ 10 ರಿಂದ 15 ಅಡಿ ನೀರಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಿ.ಸಿ.ರೋಡ್ ಸಮೀಪದ ಗೂಡಿನಬಳಿಯ ಮುಹಮ್ಮದ್ ನೀರಿನಿಂದ ಮೃತದೇಹವನ್ನು ಮೇಲೆಕೆತ್ತುವಲ್ಲಿ ಯಶಸ್ವಿಯಾದರು.
Next Story