ರಾಮನವಮಿ, ನೇಮೋತ್ಸವ ಮುಂದೂಡಿಕೆ
ಉಡುಪಿ, ಮಾ.28: ನೋವೆಲ್ ಕೊರೋನ ವೈರಸ್ ಕಾರಣದಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೀಡಿದ ಆದೇಶ, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಶಿರೂರು ಮೂಲಮಠದಲ್ಲಿ ಇದೇ ಎಪ್ರಿಲ್ 2ರಂದು ನಡೆಯಬೇಕಾಗಿದ್ದ ರಾಮನವಮಿ ಉತ್ಸವ ಹಾಗೂ ಮಠದ ಆಡಳಿತಕ್ಕೊಳಪಟ್ಟ ಗರಡಿಯಲ್ಲಿ ಎ.7ರಂದು ನಡೆಯಬೇಕಿದ್ದ ನೇಮೋತ್ಸವನ್ನು ಮುಂದೂಡಲಾಗಿದ್ದು, ಪರಿಷ್ಕೃತ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದು ಸೋದೆ ಹಾಗೂ ಶಿರೂರು ದ್ವಂದ್ವ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story