ಕರ್ತವ್ಯನಿರತ ಪೋಲಿಸ್ ಸಿಬ್ಬಂದಿಗಳಿಗೆ ಮಧ್ಯಾಹ್ನದ ಊಟ
ಶಿರ್ವ, ಮಾ.28: ಲಾಕ್ಡೌನ್ ಹಿನ್ನೆಲೆಯಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿರುವ ಶಿರ್ವ ಠಾಣೆಯ 20 ಮಂದಿ ಪೋಲಿಸ್ ಸಿಬ್ಬಂದಿಗಳಿಗೆ ಶಿರ್ವ ಗ್ರಾಪಂನ ನಿವೃತ್ತ ಗುಮಾಸ್ತ ಕೆ.ಸುಂದರ ಪ್ರಭು ಮಧ್ಯಾಹ್ನದ ಊಟವನ್ನು ಮನೆಯಲ್ಲಿ ತಯಾರಿಸಿ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇವರ ಈ ಕಾರ್ಯಕ್ಕೆ ಸತೀಶ್ ಶೆಣೈ, ರಘುರಾಮ ಶೆಣೈ, ಗುರುರಾಜ ಶೆಣೈ ಕೈಜೋಡಿಸಿದ್ದು, ಒಂದೊಂದು ದಿನದ ಒಬ್ಬೊಬ್ಬರು ಊಟ ನೀಡುವ ವ್ಯವಸ್ಥೆಗೆ ಮುಂದಾಗಿದ್ದಾರೆ. ಅನಂತ ಮೂಡಿತ್ತಾಯ, ಲವಿನಾ, ಅವಿನಾಶ್ ಶೆಟ್ಟಿ, ಸುಜನ್ಕುಮಾರ್, ರಾಜೇಶ್ ನಾಯಕ್, ರಮೇಶ್ ಹಾಗೂ ಇತರ ಸ್ನೇಹಿತರು ಎ.14ರವರೆಗೆ ಈ ಸೇವೆ ನಿರಂತರವಾಗಿ ಮುಂದುವರಿಸುವಲ್ಲಿ ಸಹಕಾರ ನೀಡಲಿದ್ದಾರೆ. ಗಿರಿಧರ್ ಪ್ರಭು ನೇತೃತ್ವದಲ್ಲಿ ಶಿರ್ವ ಠಾಣೆಯಲ್ಲಿಯೇ ಊಟ ವಿತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ.
Next Story