ಮಂಗಳೂರು: ಪೊಲೀಸರ ತೀವ್ರ ತಪಾಸಣೆ
ಮಂಗಳೂರು, ಮಾ.30: ನಗರದ ವಿವಿಧ ಕಡೆ ಪೊಲೀಸರು ಬಿಗು ಭದ್ರತೆ ಏರ್ಪಡಿಸಿದ್ದು, ತೀವ್ರ ತಪಾಸಣೆ ನಡೆಸುತ್ತಿದ್ದಾರೆ.
ನಗರದ ಕಂಕನಾಡಿ, ವಲೆನ್ಸಿಯ, ಜ್ಯೋತಿಯ ಅಂಬೇಡ್ಕರ್ ವೃತ್ತ, ಹಂಪನಕಟ್ಟೆ, ಕ್ಲಾಕ್ ಟವರ್, ಸ್ಟೇಟ್ಬ್ಯಾಂಕ್ ಬಳಿ ಬ್ಯಾರಿಕೇಡ್ ಅಳವಡಿಸಿ ತಪಾಸಣೆ ಮಾಡುತ್ತಿದ್ದಾರೆ. ತುರ್ತು ಸೇವೆ ಹೊರತುಪಡಿಸಿ ಇತರ ಎಲ್ಲಾ ವಾಹನಗಳನ್ನು ತಡೆಯುತ್ತಿದ್ದಾರೆ. ಅಲ್ಲದೆ ಧ್ವನಿವರ್ಧಕದ ಮೂಲಕ ಎಚ್ಚರಿಕೆಯ ಸಂದೇಶ ನೀಡುತ್ತಿದ್ದಾರೆ.
ಈ ಮಧ್ಯೆ ತುರ್ತು ಸೇವೆ ನಿಮಿತ್ತ ಮನೆಯಿಂದ ಹೊರಬಂದವರ ಮೇಲೆ ಪೊಲೀಸರ ಲಾಠಿ ಪ್ರಹಾರ, ಸಾರ್ವಜನಿಕ ಬಸ್ಕಿ ಶಿಕ್ಷೆಯೂ ಮುಂದುವರಿದಿದೆ. ಸೋಮವಾರ ಬೆಳಗ್ಗೆ ಉಳ್ಳಾಲದ ಮಾಸ್ತಿಕಟ್ಟೆಯ ಬಳಿ ಔಷಧ ಪಡೆದು ಮನೆಗೆ ಮರಳುತ್ತಿದ್ದ ರೋಗಿಯನ್ನು ರಿಕ್ಷಾದಿಂದ ಇಳಿಸಿ ಚಾಲಕನಿಗೆ ಸಾರ್ವಜನಿಕವಾಗಿ ಬಸ್ಕಿ ತೆಗೆಸಿ ಹಿಂಸಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.