ಕಲಾವಿದ ವೆಂಕಿ ಪಲಿಮಾರುರಿಂದ ವಿನೂತನ ಕೊರೋನಾ ಜನಜಾಗ್ರತಿ
ಉಡುಪಿ, ಮಾ.31: ಕರೋನಾ ರೋಗ ಭಾರತದಲ್ಲಿ ಹರಡುವುದನ್ನು ತಡೆಯುವುದಕ್ಕಾಗಿ ದೇಶವ್ಯಾಪಿ ಜನಜಾಗ್ರತಿ ಸಂದೇಶಗಳು, ಕಾರ್ಯಕ್ರಮಗಳು ನಡೆಯುತ್ತಿದ್ದು, ಜಿಲ್ಲೆಯ ಕಲಾವಿದ ವೆಂಕಿ ಪಲಿಮಾರು ಕೂಡ ವಿನೂತನ ರೀತಿಯಲ್ಲಿ ತಮ್ಮ ಸಂವೇದನೆಯನ್ನು ವ್ಯಕ್ತ ಪಡಿಸಿ ಜನರಲ್ಲಿ ಜಾಗ್ರತಿ ಮೂಡಿಲು ವಿಶೇಷ ಪ್ರಯತ್ನ ನಡೆಸಿದ್ದಾರೆ.
ಮುಲ್ಕಿ ಪಲಿಮಾರು ತಮ್ಮ ಕಲಾಶಾಲೆಯಲ್ಲಿ ಸುಮಾರು ಐದು ಅಡಿ ಎತ್ತರದ ಕರೋನಾ ವೈರಸ್ ಬಲೆಯ ಕಲಾಕೃತಿಯನ್ನು ನಿರ್ಮಾಣ ಮಾಡಿ ನಾವು ಈ ಸಂದರ್ಭದಲ್ಲಿ ಸುರಕ್ಷಿತವಾಗಿ ಮನೆಯಲ್ಲಿರದೆ ಇದ್ದಲ್ಲಿ ಇದೆ ರೀತಿ ಕರೋನಾ ವೈರಸ್ನ ಬಲೆಯಲ್ಲಿ ಹೊರ ಬರಲಾರದಂತೆ ಸಿಕ್ಕಿ ಹಾಕಿ ಕೊಳ್ಳುವುದು ಖಚಿತ ಎನ್ನುವ ಸಂದೇಶವನ್ನು ಸಾರ್ವಜನಿಕರಿಗೆ ರವಾನಿಸಿದ್ದಾರೆ.
Next Story