ಉಡುಪಿ: ಬಾಲಕ ನಾಪತ್ತೆ
ಉಡುಪಿ, ಎ.2: ಇಲ್ಲಿನ ಸರಕಾರಿ ವೀಕ್ಷಣಾಲಯದ ಉಡುಪಿ ಸಂಸ್ಥೆಯ ಅಭಿರಕ್ಷೆಯಲ್ಲಿದ್ದ ಬಾಲನ್ಯಾಯ ಮಂಡಳಿಗೆ ಸಂಬಂಧಿಸಿದ ಕಾನೂನಿನೊಡನೆ ಸಂಘರ್ಷಕ್ಕೊಳಗಾದ ಬಾಲಕ ನಿಖಿಲ್ ಸುರೇಶ್ ರಾಮಪ್ಪ ಸಾಹುಕಾರ್ (14) ಬುಧವಾರ ಸಂಜೆಯ ವೇಳೆಗೆ ರಕ್ಷಕರ ಕಣ್ತಪ್ಪಿಸಿ ಕೆಳಗಿನ ನೆಲ ಅಂತಸ್ತಿಗೆ ಓಡಿ ಬಂದು ಮುಖ್ಯದ್ವಾರದ ಚಿಲಕವನ್ನು ತೆಗೆದು ಹೊರಗೆ ಓಡಿ ತಪ್ಪಿಸಿಕೊಂಡಿರುವುದಾಗಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story