ಮಂಗಳೂರು: ಐಎಂಎ ಸ್ಥಾಪಕರ ದಿನಾಚರಣೆ
ಮಂಗಳೂರು, ಮೇ 16: ಭಾರತೀಯ ವೈದ್ಯರ ಸಂಘ (ಐಎಂಎ)ದ ಸ್ಥಾಪಕರ ದಿನಾಚರಣಾ ಸಮಾರಂಭವು ಇತ್ತೀಚೆಗೆ ಮಂಗಳೂರಿನ ಐಎಂಎ ಸಭಾಂಗಣದಲ್ಲಿ ನಡೆಯಿತು. ಕರ್ನಾಟಕ ರಾಜ್ಯ ಭಾರತೀಯ ವೈದ್ಯರ ಸಂಘದ ಅಧ್ಯಕ್ಷ ಡಾ.ಜಿ.ಎನ್. ಪ್ರಭಾಕರ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಐಎಂಎ ಮಂಗಳೂರಿನ ಮಾಜಿ ಅಧ್ಯಕ್ಷ ಡಾ.ಭಾಸ್ಕರ್ ಶೆಟ್ಟಿ ಮಾತನಾಡಿ, ಐಎಂಎ ಸಭಾಂಗಣಕ್ಕಾಗಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ಮಂಗಳೂರಿನ ಐಎಂಎ ಮಾಜಿ ಅಧ್ಯಕ್ಷರಾದ ಡಾ.ಕೆ.ಆರ್. ಶೆಟ್ಟಿ, ಡಾ.ಎ.ವಿ.ಶೆಟ್ಟಿ, ಡಾ.ಕೆ.ವಿ.ದೇವಾಡಿಗ, ಡಾ.ಗಣೇಶ್ ಎಸ್. ಪೈ, ಡಾ. ಶಾಂತರಾಮ್ ಶೆಟ್ಟಿ, ಡಾ.ಐ.ಜಿ.ಭಟ್, ಡಾ.ಎ.ಪ್ರಭಾಕರ್ ರಾವ್, ಡಾ.ಎಚ್.ಎಸ್.ಬಲ್ಲಾಳ್, ಡಾ. ಸಂಜೀವ ರೈ, ಡಾ.ಕೃಷ್ಣ ಮೂರ್ತಿ ರಾವ್, ಡಾ. ಭಾಸ್ಕರ್ ಶೆಟ್ಟಿ, ಡಾ. ಸಿ.ಪಿ. ಹಬೀಬ್ ರಹ್ಮಾನ್, ಡಾ. ಜಿ.ಕೆ. ಭಟ್, ಡಾ. ಜೆ.ಪಿ. ಶೆಟ್ಟಿ, ಡಾ. ಕೆ. ಮುಕುಂದ, ಡಾ. ಅಮೃತ ಭಂಡಾರಿ ಮತ್ತಿತರರನ್ನು ಅಭಿನಂದಿಸಲಾಯಿತು.
Next Story