ಡಾ.ಮಂಜುನಾಥ್ಗೆ ಜೀವಮಾನ ಸಾಧನಾ ಪ್ರಶಸ್ತಿ
ಬೆಳ್ತಂಗಡಿ, ಮೇ 23: ಪಶುವೈದ್ಯಕೀಯ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ನಾಲ್ಕು ದಶಕಗಳ ವೈಶಿಷ್ಟ್ಯಪೂರ್ಣ ಸೇವೆಗಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ರಿಗೆ ಕರ್ನಾಟಕ ಪಶುವೈದ್ಯ ಕೀಯ ಸಂಘದಿಂದ 2016-17ನೆ ಸಾಲಿನ ಜೀವಮಾನ ಸಾಧನಾ ಪ್ರಶಸ್ತಿ ಗೌರವವನ್ನು ನೀಡಿ ಗೌರವಿಸಲಾಗಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯ ಪಶುವೈದ್ಯಕೀಯ ಸಂಘದ ಮಹಾಸಭೆಯಲ್ಲಿ ನೀಡಲಾದ ಈ ಪ್ರಶಸ್ತಿಯನ್ನು ರಾಜ್ಯ ವಿಧಾನ ಪರಿಷತ್ ಉಪಸಭಾಪತಿ ಎನ್.ಎಚ್.ಶಿವಶಂಕರ ರೆಡ್ಡಿ ಪ್ರದಾನಿಸಿದರು. ರಾಷ್ಟ್ರೀಯ ಪಶುವೈದ್ಯಕೀಯ ಆಯುಕ್ತ ಡಾ.ಸುರೇಶ್ ಎಸ್. ಹೊನ್ನಪ್ಪಗೋಳ್ ಉಪಸ್ಥಿತರಿದ್ದರು.
Next Story