ಎಂಆರ್ಜಿ ಗ್ರೂಪ್ನಿಂದ 1 ಕೋಟಿ ರೂ. ವೆಚ್ಚದ ದಿನಸಿ ಕಿಟ್ ವಿತರಣೆ
ಮಂಗಳೂರು, ಎ.2: ಕೊರೋನ ವೈರಸ್ ತೊಂದರೆಗೊಳಗಾದ ಬಡ ಕುಟುಂಬಗಳಿಗೆ ಎಂಆರ್ಜಿ ಗೂಪ್ನ ಆಡಳಿತ ನಿರ್ದೇಶಕ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಸುಮಾರು 1 ಕೋಟಿ ರೂ. ವೆಚ್ಚದ ದಿನಬಳಕೆ ವಸ್ತುಗಳನ್ನು ದ.ಕ. ಮತ್ತು ಉಡುಪಿ ಜಿಲ್ಲಾದ್ಯಂತ ವಿತರಿಸಿದರು. ಕರಾವಳಿ ಜಿಲ್ಲೆಯ ಎಲ್ಲ ಶಾಸಕರಿಗೆ 150 ಕಿಟ್ ಮತ್ತು ಎಲ್ಲ ಬಂಟರ ಸಂಘಗಳಿಗೆ ಪ್ರಕಾಶ್ ಶೆಟ್ಟಿ ಕಿಟ್ ಗಳನ್ನು ವಿತರಿಸಿದರು.
ದ.ಕ. ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಮೂಡುಬಿದಿರೆ, ಸುರತ್ಕಲ್, ಮುಲ್ಲಿ ಮತ್ತು ಮಂಗಳೂರು ನಗರದ ವಿವಿಧೆಡೆ ದಿನಬಳಕೆ ವಸ್ತುಗಳನ್ನು ವಿತರಿಸಲಾಯಿತು.
ಕಿಟ್ ವಿತರಣಾ ವ್ಯವಸ್ಥೆಯನ್ನು ಪ್ರಸಾದ್ ಕುಮಾರ್ ಶೆಟ್ಟಿ, ನಿತೇಶ್ ಶೆಟ್ಟಿ ಎಕ್ಕಾರು, ಈಶ್ವರ್ ಪ್ರಸಾದ್, ರಂಜಿತ್ ಶೆಟ್ಟಿ ಎಕ್ಕಾರು ನಿರ್ವಹಿಸಿದರು.
Next Story