ಒಂದು ಸಮುದಾಯ, ಮಸೀದಿ, ಮೌಲಾನಾಗಳ ನಿಂದನೆ: ನಂದಾವರದ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲು
ಆರೋಪಿ ಚರಣ್ ಗಟ್ಟಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಹಾಕಿದ್ದೆನ್ನಲಾದ ಪೋಸ್ಟ್ ಗಳಲ್ಲೊಂದು.
ಬಂಟ್ವಾಳ, ಎ.6: ಕೊರೋನ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ಸಮುದಾಯವನ್ನು ನಿಂದಿಸಿ ಅವಹೇಳನ ಮಾಡಿರುವ ಆರೋಪಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬನ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್.ಡಿ.ಪಿ.ಐ. ನಂದಾವರ ಬ್ರಾಂಚ್ ಅಧ್ಯಕ್ಷ ಮುಹಮ್ಮದ್ ಆಸಿಫ್ ಇಬ್ರಾಹೀಂ ಎಂಬವರು ನೀಡಿರುವ ದೂರಿನಂತೆ, ನಂದಾವರ ನಿವಾಸಿ ಚರಣ್ ಗಟ್ಟಿ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿ ಚರಣ್ ಗಟ್ಟಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಕೊರೋನ ವೈರಸ್ ಹರಡುವಿಕೆಗೆ ಮುಸ್ಲಿಮರು ಕಾರಣವೆಂದು ಮಸೀದಿ, ಮುಸ್ಲಿಮ್ ಧರ್ಮಗುರುಗಳ ಬಗ್ಗೆ ನಿಂದಿಸಿ, ಅವಹೇಳನಕಾರಿ ಪೋಸ್ಟ್ ಗಳನ್ನು ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆರೋಪಿಯು ಸಮಾಜದಲ್ಲಿ ಕೋಮು ವೈಷಮ್ಯವನ್ನು ಹರಡಿ ಕೋಮು ಗಲಭೆ, ಅಶಾಂತಿ ನಡೆಸುವ ಹುನ್ನಾರವನ್ನು ಹೊಂದಿದ್ದು ಆದ್ದರಿಂದ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.
Next Story