ಅನಂತಾಡಿ : ಕೋಷ್ಟಲ್ ಸಂಸ್ಥೆಯಿಂದ ಕಿಟ್ ವಿತರಣೆ
ವಿಟ್ಲ : ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೋಳಗಾದ ಅನಂತಾಡಿ ಗ್ರಾಮದ 180 ಕುಟುಂಬಗಳಿಗೆ ಕೋಸ್ಟಲ್ ಸಂಸ್ಥೆಯ ಮಾಲಕರಾದ ಪ್ರಕಾಶ್ ಶೆಟ್ಟಿಯವರ ವತಿಯಿಂದ ನೀಡಲಾದ ಆಹಾರ ಸಾಮಗ್ರಿಗಳ ಕಿಟ್ಟನ್ನು ಆನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ವಿತರಣೆ ಮಾಡಲಾಯಿತು.
ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಆಧ್ಯಕ್ಷೆ ಜಯಂತಿ ವಿ ಪೂಜಾರಿ, ತುಂಬೆ ಬಿ.ಎ.ಕಾಲೇಜು ಪ್ರಾಂಶುಪಾಲ ಕೆ.ಎನ್ ಗಂಗಾಧರ ಆಳ್ವ ಹಾಗೂ ನಾರಾಯಣ ಸಾಲ್ಯಾನ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಿ.ಎ.ಎಸ್.ಎಫ್ ಸಂಸ್ಥೆಯ ನಿವೃತ ಮುಖ್ಯಸ್ಥ ಪುರಂದರ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಪುರಂದರ ಗೌಡ ತಾಳಿಪಡ್ಪು, ಅನಂತಾಡಿ ವಲಯ ಕಾಂಗ್ರೆಸ್ ಅದ್ಯಕ್ಷರದ ಸತೀಶ್ ಬಾಕಿಲ, ನಾರಾಯಣ, ಸುಂದರ, ಪ್ರಸಾದ್, ನವೀನ್, ಆನಂದ, ವಿಠಲ, ಕೃಷ್ಣಪ್ರಸಾದ್ ರೈ, ಮೊನಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.
Next Story