ಬೈಂದೂರು: ಬಾವಿಗೆ ಬಿದ್ದು ಯುವಕ ಮೃತ್ಯು
ಬೈಂದೂರು, ಎ.29: ತನ್ನ ಮನೆಯ ಬಾವಿಯಿಂದ ನೀರು ತೆಗೆಯುತಿದ್ದಾಗ, ಅಕಸ್ಮಿಕವಾಗಿ ಕಾಲುಜಾರಿ ಮುಗ್ಗರಿಸಿ ಬಾವಿಗೆ ಬಿದ್ದು ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ಬೈಂದೂರಿ ನಿಂದ ವರದಿಯಾಗಿದೆ.
ಮೃತರನ್ನು ಸಂತೋಷ ಪೂಜಾರಿ (28) ಎಂದು ಗುರುತಿಸಲಾಗಿದೆ.
ಅವರು ಬಾವಿಯಿಂದ ನೀರು ತೆಗೆಯಲು ಕೊಡಪಾನಕ್ಕೆ ಹಗ್ಗಕಟ್ಟಿ, ರಾಟೆ ಮೂಲಕ ನೀರು ತೆಗೆಯುತಿದ್ದಾಗ ಅಕಸ್ಮಿಕವಾಗಿ ಕಾಲು ಜಾರಿ ಮುಗ್ಗರಿಸಿ ಬಾವಿಯೊಳಗೆ ಬಿದ್ದರೆನ್ನ ಲಾಗಿದೆ. ಮೇಲೆ ಬರಲಾಗದೇ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟರು ಎಂದು ಪ್ರಕರಣ ದಾಖಲಿಸಿಕೊಂಡಿರುವ ಬೈಂದೂರು ಪೊಲೀಸರು ತಿಳಿಸಿದ್ದಾರೆ.
Next Story