ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಫೌಂಡೇಶನ್ 2020-21ನೇ ಸಾಲಿನ 'ರಾಷ್ಟೀಯ ಪ್ರಶಸ್ತಿ'ಗೆ ಅರ್ಜಿ ಆಹ್ವಾನ
ವಿಟ್ಲ: ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಫೌಂಡೇಶನ್ ವತಿಯಿಂದ ಕೊಡಲಾಗುವ 2020-21 ನೇ ಸಾಲಿನ 'ರಾಷ್ಟೀಯ ಪ್ರಶಸ್ತಿ'ಗಾಗಿ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರು ಜೂನ್ 25 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಫೌಂಡೇಶನ್ ಅಧ್ಯಕ್ಷ ಎಂ.ಡಿ ಜಹಾಂಗೀರ ಅಲಿ ಹಾಗೂ ದ.ಕ ಜಿಲ್ಲಾ ಸಂಚಾಲಕ ಆಶಿಕ್ ಅಲಿ ಪುತ್ತೂರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕೆಳಗಿನ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ 'ರಾಷ್ಟೀಯ ಪ್ರಶಸ್ತಿ'ಯನ್ನು ನೀಡಿ ಗೌರವಿಸಲಾಗುವದು. ಪ್ರತಿಯೊಂದು ಕ್ಷೇತ್ರದಲ್ಲಿ 3 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಪತ್ರಿಕೋದ್ಯಮ, ಮಹಿಳಾ ಶಿಕ್ಷಣದ ತಲಾ 15 ವಿದ್ಯಾರ್ಥಿ ಸಾಧಕರನ್ನು ಗುರುತಿಸಲಾಗುವದು.
ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.
ಎಂ.ಡಿ. ಜಹಾಂಗೀರ, ಅದ್ಯಕ್ಷರು ಡಾ. ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್,
ಮೆಗುರೆ ಆಸ್ಪತ್ರೆ ಹತ್ತಿರ.
ಮುಖ್ಯ ರಸ್ತೆ ಬಸವಕಲ್ಯಾಣ
ಪಿನ್ 585327.
Mob. 7026786321
ಕ್ಷೇತ್ರದ ವಿವರಣೆ.
1. ಆರೂಢ ರತ್ನಶ್ರೀ - ಜ್ಞಾನದ ಮಾರ್ಗಧರ್ಶನ ನೀಡುವ ಸ್ವಾಮೀಜಿಯವರಿಗೆ.
2.ಬಸವ ಭೂಷಣ - ಶಾಸ್ತ್ರಿಗಳಿಗೆ.
3.ಜ್ಞಾನರತ್ನ - ಸಾಹಿತ್ಯ ಕ್ಷೇತ್ರ
4.ನ್ಯಾಯರತ್ನ - ನ್ಯಾಯಾಂಗ ಕ್ಷೇತ್ರ
5. ವಿದ್ಯಾರತ್ನ - ಶಿಕ್ಷಣ ಕ್ಷೇತ್ರ
6. ಕರ್ನಾಟಕ ರತ್ನ.-ಪ್ರಾಮಾಣಿಕ ಅಧಿಕಾರಿಗಳಿಗೆ.
7. ನಾದ ರತ್ನ - ಸಂಗೀತ ಕ್ಷೇತ್ರ
8. ಕಾಯಕ ರತ್ನ. - ಕೃಷಿ ಕ್ಷೇತ್ರ.
9. ಪರಿಸರ ರತ್ನ - ಪರಿಸರ ಕ್ಷೇತ್ರ
10. ಕ್ರೀಡಾ ರತ್ನ - ಕ್ರೀಡಾ ಕ್ಷೇತ್ರ
11.ಕಲಾ ರತ್ನ - ಯಕ್ಷಗಾನ ಕ್ಷೇತ್ರ
12.ಕಲಾಭೂಷಣ - ಚಲನಚಿತ್ರ ಕ್ಷೇತ್ರ.
13. ಕಲಾ ಕಾಯಕಶ್ರೀ -ರಂಗಭೂಮಿ ಕ್ಷೇತ್ರ
14. ಕಲಾ ಜ್ಞಾನಿ - ಶಿಲ್ಪ ಕಲೆ ಕ್ಷೇತ್ರ.
15. ಜ್ಞಾನ ದರ್ಶನ ವಾಣಿ -ಜನಪದ ಕ್ಷೇತ್ರ.
16. ಕಲಾ ಮಾಣಿಕ್ಯ - ಚಿತ್ರಕಲೆ
17. ಶ್ರೇಷ್ಠ ರತ್ನಶ್ರೀ - ಸಂಘ ಸಂಸ್ಥೆ ಕ್ಷೇತ್ರ
18.ಸೇವಾರತ್ನ - ಸಮಾಜಸೇವೆ
19. ಮಾಧ್ಯಮ ರತ್ನ -ಪತ್ರಿಕೋದ್ಯಮ.
20. ಕಾಯಕ ರತ್ನ -ಜನಪ್ರತಿನಿದಿಗಳು.
21. ಸರ್ವ ಶ್ರೇಷ್ಠ ಮಾಣಿಕ್ಯ -ವೀರಯೋಧರಿಗೆ
22. ಶಾಂತಿಭೂಷಣ - ಪೋಲಿಸ್ ಇಲಾಖೆಗೆ.
23.) ಬಸವರತ್ನ ಶ್ರೀ - ಉದ್ಯಮಿಗಳಿಗೆ.
24. ಅಂಚೆ ರತ್ನ -ಅಂಚೆ ಇಲಾಖೆ.
25. ವಿದ್ಯಾ ಕುಸುಮ - ಆದರ್ಶ ವಿದ್ಯಾರ್ಥಿಗಳಿಗೆ.
26. ಜನಸ್ನೇಹಿ - ಆಟೋ ಚಾಲಕರಿಗೆ.
27. ವೈದ್ಯ ರತ್ನ - ಆದರ್ಶ ವೈದ್ಯರಿಗೆ.
28. ಗ್ರಾಮ ರತ್ನ - ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ/ಗ್ರಾಮ ಪಂಚಾಯತ್ ಸದಸ್ಯರು
29. ಕನ್ನಡ ರತ್ನ - ಕನ್ನಡ ಸಂಘಟನೆ ಕ್ಷೇತ್ರ.
30. ವೀರ ವನಿತೆ - ವೀರ ಮಹಿಳೆಯರಿಗೆ.
ಈ ಮೇಲ್ಕಾಣಿಸಿದ ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನ ಆಯ್ಕೆಮಾಡಲಾಗುವುದು. ಅರ್ಜಿಯನ್ನು ಪೋಸ್ಟ್ ಅಥವಾ ಕೊರಿಯರ್ ಮೂಲಕ ಕಳಿಸಬೇಕು ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.