ಬೈಂದೂರು: ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು
ಬೈಂದೂರು, ಮೇ 8: ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಆಯತಪ್ಪಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮೇ 7ರಂದು ಮಧ್ಯಾಹ್ನ ವೇಳೆ ಕಿರಿಮಂಜೇಶ್ವರ ಆದ್ರಗೋಳಿ ಎಂಬಲ್ಲಿ ನಡೆದಿದೆ.
ಮೃತರನ್ನು ಆದ್ರಗೋಳಿಯ ರಾಮ ಮೋಗವಿರ(57) ಎಂದು ಗುರುತಿಸಲಾಗಿದೆ. ಇವರು ತೋಟದ ಬಳಿ ಇರುವ ಬಾವಿಯ ಪಂಪ್ನಲ್ಲಿ ಸರಿಯಾಗಿ ನೀರು ಬಾರದ ಕಾರಣ ಬಾವಿಯ ಹತ್ತಿರ ಹೋಗಿ ಅದರ ಫುಟ್ಬಾಲ್ನ್ನು ಎತ್ತಿ, ಸರಿಪಡಿಸಿದ್ದು, ಬಳಿಕ ಫುಟ್ಬಾಲನ್ನು ಮತ್ತೆ ಬಾವಿಗೆ ಇಳಿಸುವಾಗ ಅವರು ಆಕಸ್ಮಿಕವಾಗಿ ಬಾವಿಯೊಳಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story