ಕೊಲ್ಲೂರು ಕ್ವಾರಂಟೆನ್ ಅವ್ಯವಸ್ಥೆ ಸರಿಪಡಿಸಲು ಆಗ್ರಹ
ಬೈಂದೂರು, ಮೇ 21: ಮುಂಬೈನಿಂದ ಆಗಮಿಸಿದ ಬೈಂದೂರು ನಾಗರಿ ಕರು ತಂಗಲು ವ್ಯವಸ್ಥೆ ಮಾಡಿರುವ ಕೊಲ್ಲೂರಿನ ವಸತಿ ನಿಲಯದ ಕ್ವಾರಂಟೈನ್ ಕೇಂದ್ರದ ಅವ್ಯವಸ್ಥೆ ಕೂಡಲೇ ಸರಿಪಡಿಸಬೇಕೆಂದು ಸಿಪಿಎಂ ಬೈಂದೂರು ವಲಯ ಸಮಿತಿ ಆಗ್ರಹಿಸಿದೆ.
ಕಳೆದ 7ದಿನಗಳಿಂದ ಕ್ವಾರಂಟೈನ್ನಲ್ಲಿರುವ ಪುಟ್ಟ ಮಕ್ಕಳು, ಮಹಿಳೆಯರಿಗೆ ಯಾವುದೇ ಸುರಕ್ಷತೆ ಇಲ್ಲದೇ ಇದ್ದೇವೆ ಎಂದು ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿರುವುದು ಪರಿಸ್ಥಿತಿಯ ಗಂಭೀರತೆ ಸೂಚಿಸುತ್ತಿದೆ. ಕ್ವಾರಂಟೈನ್ನಲ್ಲಿದ್ದವರನ್ನು ನಿರ್ಲಕ್ಷ್ಯ ಮಾಡಬಾರದು. ಕೂಡಲೇ ಜಿಲ್ಲಾಡಳಿತ ಅವರಿಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಸಿಪಿಎಂ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
Next Story