ನಿಪ್ಪಾಣಿಯಲ್ಲಿ ಸಿಲುಕಿದವರಿಗೆ ನೆರವು: ಮಾನವೀಯತೆ ಮೆರೆದ ಬಸ್ ಮಾಲಕ
ಉಡುಪಿ, ಮೇ 21: ಸೇವಾ ಸಿಂಧು ಪಾಸ್ ಇಲ್ಲದ ಕಾರಣಕ್ಕೆ ಮಹಾರಾಷ್ಟ್ರ ದಿಂದ ಬಂದು ನಿಪ್ಪಾಣಿಯಲ್ಲಿ ಎರಡು ದಿನಗಳಿಂದ ತಡೆಹಿಡಿಯಲ್ಪಟ್ಟ ಗರ್ಭಿಣಿ ಸಹಿತ ಸುಮಾರು 31 ಮಂದಿ ಇಂದು ಉಡುಪಿ ತಲುಪಿದ್ದಾರೆ.
ಇವರಿಗೆ ಸಹಾಯಹಸ್ತ ನೀಡುವ ಮೂಲಕ ರೇಷ್ಮಾ ಬಸ್ ಮಾಲಕ ಮುಹಮ್ಮದ್ ಮತೀನ್ ಮಾನವೀಯತೆ ಮೆರೆದಿದ್ದಾರೆ. ತಮ್ಮ ಸ್ವಂತ ಹಣ ಸುಮಾರು 10,000 ರೂ. ಖರ್ಚು ಮಾಡಿ, ಗಡಿಯಲ್ಲಿ ಸಿಲುಕಿದ್ದ ವೃದ್ಧರನ್ನು, ಗರ್ಭಿಣಿ ಹಾಗು ಮಕ್ಕಳನ್ನು ಉಡುಪಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ.
ಇವರಿಗೆ ಸುರೇಶ್ ಶೆಟ್ಟಿ ಯೆಯ್ಯಿಡಿ, ದಿನೇಶ್ ಕಾಪು ಸಹಾಯ ನೀಡಿದ್ದಾರೆ. ಇವರೆಲ್ಲರಿಗೂ ಉಡುಪಿ ತಲುಪಿರುವ ಮುಂಬೈ ಕನ್ನಡಿಗರು ಕೃತಜ್ಞತೆಯನ್ನು ಲ್ಲಿಸಿದ್ದಾರೆ.
Next Story