ಭಟ್ಕಳ: ಮರ ಬಿದ್ದು ಮೂರು ಮನೆಗಳಿಗೆ ಹಾನಿ
ಭಟ್ಕಳ: ಹಳೆಯ ಮರವೊಂದು ಮುರಿದು ಬಿದ್ದು ಮೂರು ಮನೆಗಳಿಗೆ ಹಾನಿಯಾಗಿರುವ ಘಟನೆ ತಾಲೂಕಿನ ಮುಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಮನೆಯು ದುರ್ಗಪ್ಪ ರಾಮ ನಾಯ್ಕ, ಪದ್ಮಾವತಿ ನಾಗಪ್ಪ ನಾಯ್ಕ, ವೆಂಕಟೇಶ್ ಮಳ್ಳ ನಾಯ್ಕ ಎಂಬವರಿಗೆ ಸೇರಿದ್ದಾಗಿದೆ. ಯುವತಿಯೋರ್ವಳು ಚಿಕ್ಕ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾಳೆ. ಜನರು ಮನೆಯಲ್ಲಿಯೇ ಇದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದು, ಅದೃಷ್ಟವಷಾತ್ ದುರಂತವೊಂದು ತಪ್ಪಿ ಹೋಗಿದೆ.
ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಡಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾಗಪ್ಪ ನಾಯ್ಕ ಮತ್ತಿತರರು ಸ್ಥಳಕ್ಕೆ ಧಾವಿಸಿ ಸಂತ್ರಸ್ತರಿಗೆ ಸಹಕರಿಸಿದರು.