ಉಡುಪಿ: ಮೇ 27ರಂದು ರೆಡ್ಕ್ರಾಸ್ನಿಂದ ರಕ್ತದಾನ ಶಿಬಿರ
ಉಡುಪಿ, ಮೇ 26: ಕೊರೊನಾ ವೈರಸ್ ಪ್ರಯುಕ್ತ ದೇಶವೇ ಲಾಕ್ಡೌನ್ ನಲ್ಲಿದ್ದು ಹೆಚ್ಚಿನ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಇರುವುದರಿಂದ ಹಾಗೂ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಶತಮನೋತ್ಸವ ದಿನಾಚರಣೆ ಅಂಗವಾಗಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಮತ್ತು ಕುಂದಾಪುರ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಮೇ 27ರ ಬುದವಾರ ಬೆಳಗ್ಗೆ 9:30 ರಿಂದ ಅಪರಾಹ್ನ 2 ರವರೆಗೆ ಅಜ್ಜರಕಾಡಿನ ರೆಡ್ಕ್ರಾಸ್ ಭವನದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.
ಉಡುಪಿ ಶಾಸಕ ಕೆ.ರಘುಪತಿ ಭಟ್, ಎಸ್. ಜಯಕರ್ ಶೆಟ್ಟಿ, ಕುಂದಾಪುರ ರಕ್ತನಿಧಿ ಕೇಂದ್ರದ ಸಭಾಪತಿ ಮತ್ತು ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಇರ ಉಪಸ್ಥಿತಿಯಲ್ಲಿ ಶಿಬಿರ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕೋವಿಡ್-19 ನಿಯಮದ ಪ್ರಕಾರ ಸ್ಯಾನಿಟೈಶನ್, ಮಾಸ್ಕ್ ಧರಿಸುಕೆ ಮತ್ತು ಅಗತ್ಯ ಸುರಕ್ಷತಾ ಅಂತರದ ನಿಬಂಧನೆ ಗಳನ್ನು ಪಾಲಿಸಲಾಗುವುದು ಎಂದು ರೆಡ್ ಕ್ರಾಸ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Next Story