ಉಡುಪಿ ಡಿಸಿ ವಿರುದ್ಧ ಸಿಎಂಗೆ ಮಾಜಿ ಸಚಿವ ಪ್ರಮೋದ್ ದೂರು
ಉಡುಪಿ, ಮೇ 27: ದುಬೈಯಿಂದ ಆಗಮಿಸಿದ್ದ ಗರ್ಭಿಣಿಯ ಕ್ವಾರಂಟೈನ್ ಅವಧಿ ಮುಗಿದರೂ ಮನೆಗೆ ಕಳುಹಿಸದ ಉಡುಪಿ ಜಿಲ್ಲಾಧಿಕಾರಿ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಟ್ವೀಟ್ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.
ದುಬೈಯಿಂದ ಆಗಮಿಸಿದ್ದ ಗರ್ಭಿಣಿಯನ್ನು ಸರಕಾರದ ನಿಯಮಗಳಿಗೆ ವಿರುದ್ಧವಾಗಿ 15 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಆಕೆಯ ಕ್ವಾರಂಟೈನ್ ಅವಧಿ ಮುಗಿದರೂ ಮನೆಗೆ ಜಿಲ್ಲಾಡಳಿತ ಮನೆಗೆ ಕಳುಹಿಸಿಲ್ಲ. ಅವರಿಗೆ ಮನೆಯಿಂದ ಪೂರೈಸಲಾಗುತ್ತಿದ್ದ ಆಹಾರವನ್ನು ಕೂಡ ಜಿಲ್ಲಾಡಳಿತ ನಿಲ್ಲಿಸಿದೆ ಎಂದು ಅವರು ಟ್ವೀಟ್ನಲ್ಲಿ ದೂರಿದ್ದಾರೆ.
ಜಿಲ್ಲಾಧಿಕಾರಿ ಪ್ರತಿಕ್ರಿಯೆ: ಬೇಜವಾಬ್ದಾರಿಯ ಪ್ರಶ್ನೆಯೇ ಇಲ್ಲ, ಜಿಲ್ಲೆಗೆ ಎಂಟು ಸಾವಿರ ಮಂದಿ ಹೊರರಾಜ್ಯ ಮತ್ತು ಹೊರ ದೇಶದಿಂದ ಬಂದಿದ್ದಾರೆ. ಇವರೆಲ್ಲರನ್ನು ಪರೀಕ್ಷೆ ಮಾಡಿ ಬಿಡಬೇಕಾಗುತ್ತದೆ. ಆದುದರಿಂದ ದಯವಿಟ್ಟು ಸಹಕರಿಸಬೇಕು. ಈ ಗರ್ಭಿಣಿ ಪ್ರಾಥಮಿಕ ಸಂಪರ್ಕ ಹೊಂದಿದ ಕಾರಣ ಅವರನ್ನು 14 ದಿನಗಳ ನಂತರ ಪರೀಕ್ಷೆ ಮಾಡಿ ಬಿಡಬೇಕಾಗುತ್ತದೆ ಎಂದು ಪ್ರಮೋದ್ ಮಧ್ವರಾಜ್ ಟ್ವೀಟ್ಗೆ ಪ್ರತಿಕ್ರಿಯಿಸಿದ್ದಾರೆ.
One pregnant lady who came from Dubai has been sent for hotel quarantine against the rules of the Govt and it is 15 days and she has not been sent home and even home food has been stopped to her . Take action against @dcudupi for his irresponsibility.@BSYBJP https://t.co/dFVvqQrQpJ
— Pramod Madhwaraj (@PMadhwaraj) May 27, 2020