ಪುತ್ತೂರು: ಸರ್ವೆ ಹಾಸ್ಟೆಲ್ನ ವಾರ್ಡನ್ ಸಹಿತ ಮೂವರಿಗೆ ಕ್ವಾರಂಟೈನ್
ಪುತ್ತೂರು, ಮೇ 29: ತಾಲೂಕಿನ ಸರ್ವೆ ಗ್ರಾಮದ ಕಲ್ಪಣೆ ಹಾಸ್ಟೆಲ್ನಲ್ಲಿ ಕ್ವಾರಂಟೈನ್ನಲ್ಲಿದ್ದ ಮೂವರು ವ್ಯಕ್ತಿಗಳಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಹಾಸ್ಟೆಲ್ ವಾರ್ಡನ್ ಸೇರಿದಂತೆ ಮೂವರು ಸಿಬ್ಬಂದಿಯನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಮುಂಬೈಯಿಂದ ಆಗಮಿಸಿದ್ದ ಸರ್ವೆ ಗ್ರಾಮದ ದಂಪತಿ ಹಾಗೂ ಅವರ ಪುತ್ರಿ ಕಲ್ಪಣೆ ಹಾಸ್ಟೆಲ್ನಲ್ಲಿ ಕ್ವಾರಂಟೈನ್ನಲ್ಲಿದ್ದರು. ಅಲ್ಲಿ ಅವರಿಗೆ ಮೇ 28ರಂದು ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಮೂವರನ್ನೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದೀಗ ಮುಂಜಾಗರೂಕತಾ ಕ್ರಮವಾಗಿ ಹಾಸ್ಟೆಲ್ನ ವಾರ್ಡನ್ ಹಾಗೂ ಇಬ್ಬರು ಸಿಬ್ಬಂದಿಯನ್ನು ಪುತ್ತೂರಿ ಹಾಸ್ಟೆಲ್ ಒಂದರಲ್ಲಿ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
Next Story