ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಮಲ್ಪೆ, ಮೇ 29: ವಿಪರೀತ ಶರಾಬು ಸೇವನೆ ಮಾಡುವ ಚಟ ಹೊಂದಿದ್ದ ಒಡಿಸ್ಸಾ ರಾಜ್ಯದ ಅರ್ಜುನ್ ದಾಸ್ ಎಂಬವರು ವೈಯಕ್ತಿಕ ಕಾರಣದಿಂದ ಮನನೊಂದು ಮೇ 29ರಂದು ನಸುಕಿನ ವೇಳೆ ಹೂಡೆ ಉರ್ದು ಶಾಲೆ ಬಳಿಯ ಬಾಡಿಗೆಮನೆಯ ಕೋಣೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಗಂಗೊಳ್ಳಿ: ಅನಾರೋಗ್ಯ ಬಳಲುತ್ತಿದ್ದ ಮತ್ತು ಮದ್ಯ ಸೇವನೆ ಚಟ ಹೊಂದಿದ್ದ ಹೊಸಾಡು ಗ್ರಾಮದ ಹೊಕ್ಕೋಳಿ ನಿವಾಸಿ ಮಹಾಬಲ ಪೂಜಾರಿ (65) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಮೇ 28ರಂದು ತ್ರಾಸಿ ಗ್ರಾಮದ ಆನಗೋಡ್ನಲ್ಲಿರುವ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story