ಉಡುಪಿ: ರಸ್ತೆ ಬದಿಯಲ್ಲಿ ವ್ಯಾಪಾರ ನಿಷೇಧ
ಉಡುಪಿ, ಜೂ.2: ಉಡುಪಿ ನಗರದ ಎಲ್ಲಾ ರಸ್ತೆ ಬದಿ ವ್ಯಾಪಾರಿಗಳು ಮತ್ತು ರಸ್ತೆ ಬದಿ ವಾಹನಗಳಲ್ಲಿ ಹಣ್ಣು/ತರಕಾರಿ ಹಾಗೂ ರಖಂ (ಹೋಲ್ಸೇಲ್) ವ್ಯಾಪಾರಿಗಳು ಜೂನ್ 4ರಿಂದ ತಮ್ಮ ಎಲ್ಲಾ ವ್ಯಾಪಾರ/ವಹಿವಾಟುಗಳನ್ನು ನಗರದ ಆದಿಉಡುಪಿ ಬಳಿ ಇರುವ ಎಪಿಎಂಸಿ ವಾರುಕಟ್ಟೆಗೆ ಸ್ಥಳಾಂತರಿಸ ಬೇಕು.
ಯಾವುದೇ ತರಕಾರಿ/ಹಣ್ಣುಹಂಪಲು ವ್ಯಾಪಾರಸ್ಥರು ಎಪಿಎಂಸಿ ಮಾರುಕಟ್ಟೆ ಆವರಣವನ್ನು ಹೊರತುಪಡಿಸಿ, ನಗರದ ಯಾವುದೇ ಪ್ರದೇಶಗಳಲ್ಲಿ /ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುವುದನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಸಿದ್ದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಹಾಗೂ ದಂಡ ವಿಧಿಸಲಾಗುವುದು ಎಂದು ಪೌರಾಯುಕ್ತ ಆನಂದ ಸಿ.ಕಲ್ಲೋಳಿಕರ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
Next Story