ಎಸ್ಕೆಪಿಎಯಿಂದ ವಿಶ್ವ ಪರಿಸರ ದಿನಾಚರಣೆ
ಉಡುಪಿ, ಜೂ.5: ಎಸ್ಕೆಪಿಎ ಉಡುಪಿ ವಲಯದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕೊಡವೂರಿನ ಕೆರೆಕಟ್ಟೆ ಗಣಪತಿ ಗುಡಿಯ ವಠಾರವನ್ನು ಸ್ವಚ್ಚಗೊಳಿಸಿ ವನಮಹೋತ್ಸವವನ್ನು ನೆರವೇರಿಸಿ ಸುಮಾರು 75 ಗಿಡಗಳನ್ನು ಇಂದು ನೆಡಲಾಯಿತು.
ಕಾರ್ಯಕ್ರಮವನ್ನು ನಗರಸಭಾ ಸದಸ್ಯ ವಿಜಯ ಕೆ. ಕೊಡವೂರು ಉದ್ಘಾಟಿಸಿದರು. ಎಲ್ಲಾ ಸದಸ್ಯರಿಗೂ ಗಿಡವನ್ನು ಉಚಿತವಾಗಿ ನೀಡಿಲಾಯಿತು. ಈ ಸಂದರ್ಭದಲ್ಲಿ ಶ್ರೀ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ., ಜಿಲ್ಲಾಧ್ಯಕ್ಷ ಕರಂಡಾಡಿ ಶ್ರೀಧರ್ ಶೆಟ್ಟಿಗಾರ್, ಗೌರವಾಧ್ಯಕ್ಷ ಶಿವ ಕೆ.ಅಮೀನ್, ಉಪಾಧ್ಯಕ್ಷ ನವೀನ್ ಬಳ್ಳಾಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಂದರ್ ಪೂಜಾರಿ ಕೊಳಲಗಿರಿ ಉಪಸ್ಥಿತರಿದ್ದರು.
ವಲಯಾಧ್ಯಕ್ಷ ಪ್ರಕಾಶ್ ಎಸ್.ಕೊಡಂಕೂರು ಸ್ವಾಗತಿಸಿದರು. ಜಿಲ್ಲಾ ಮಾಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರು ನಿರೂಪಿಸಿದರು. ಕಾರ್ಯ ದರ್ಶಿ ಸುಕೇಶ್.ಕೆ ಅಮೀನ್ ವಂದಿಸಿದರು.
Next Story