ಹೆಬ್ರಿ: ತೋಡಿಗೆ ಬಿದ್ದು ಬಾಲಕ ಮೃತ್ಯು
ಹೆಬ್ರಿ, ಜೂ.12: ಬಾಲಕನೋರ್ವ ಮನೆಯ ಎದುರಿನ ನೀರಿನ ತೋಡಿಗೆ ಬಿದ್ದು ಮೃತಪಟ್ಟ ಘಟನೆ ಹೆಬ್ರಿ ಸಮೀಪದ ಕಾನ್ಬೆಟ್ಟು ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೃತರನ್ನು ಕಾನ್ಬೆಟ್ಟಿನ ದಯಾನಂದ ಭಟ್ ಎಂಬವರ ಮಗ ಶ್ರೀಶಾಂತ್ ಭಟ್(9) ಎಂದು ಗುರುತಿಸಲಾಗಿದೆ.
ಹೆಬ್ರಿ ಅಮೃತ ಭಾರತಿ ವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಈತ, ಮನೆ ಎದುರಿನ ತೋಡಿಗೆ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story